Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಲ್ಲರ ಬಾಯಿಗೆ ಗೋದ್ರೇಜ್ ಬೀಗ ಹಾಕಿದ ದರ್ಶನ್, ಸುದೀಪ್
ಕುಚ್ಚಿಕ್ಕೂ ಗೆಳೆಯರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯೆ ಎಲ್ಲವೂ ಸರಿಯಿಲ್ಲ. ''ನನಗೆ ನೀನು, ನಿನಗೆ ನಾನು'' ಅಂತಿದ್ದ ಆಪ್ತಮಿತ್ರರ ನಡುವೆ ವೈಷಮ್ಯ ಹೊಗೆಯಾಡುತ್ತಿದೆ. ಎಲ್ಲೇ ಹೋದರೂ ಜಂಟಿಯಾಗೇ ಹೋಗುತ್ತಿದ್ದ ಈ ಗೆಳೆಯರಿಗೆ, ಈಗ ಒಬ್ಬರ ಮುಖವನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ!
ಹೀಗಂತ ಗಾಂಧಿನಗರದಲ್ಲಿ ಕಾಗಕ್ಕ-ಗುಬ್ಬಕ್ಕ ಕಥೆ ದಿನಕ್ಕೊಂದರಂತೆ ಕಳೆದ ಎರಡು ತಿಂಗಳಿನಿಂದ ಕೇಳಿಬರುತ್ತಲೇ ಇದೆ. ಇದಕ್ಕೆ ತಕ್ಕಂತೆ ಸುದೀಪ್ ದರ್ಶನ್ ಕೂಡ ಎಲ್ಲೂ ಮುಖಾಮುಖಿಯಾಗುತ್ತಿರಲಿಲ್ಲ. ಒಬ್ಬರು ನಾಪತ್ತೆಯಾದ ನಂತ್ರ ಮತ್ತೊಬ್ಬರು ಪ್ರತ್ಯಕ್ಷವಾಗುತ್ತಿದ್ದರು. [ಆಪ್ತಮಿತ್ರ ಸುದೀಪ್ ಎದುರಿಗೆ ದರ್ಶನ್ ಬರಲ್ಲ! ಯಾಕೆ?]
ಅದಕ್ಕೆ ಮೊನ್ನೆಯಷ್ಟೇ ನಡೆದ ಸಿಸಿಎಲ್ 5ನೇ ಆವೃತ್ತಿಯ ಜರ್ಸಿ ಬಿಡುಗಡೆ ಸಮಾರಂಭ ಮತ್ತು ಅಣ್ಣಾವ್ರ ಸ್ಮರಣಾರ್ಥ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮಗಳೇ ಸಾಕ್ಷಿ. ಒಟ್ಟಾಗಿ ಕಾಣಿಸಿಕೊಳ್ಳಬೇಕಾದ ಕಾರ್ಯಕ್ರಮಗಳಲ್ಲೇ ಮೂತಿ ತಿರುಸಿದ್ದ ಈ ಗೆಳೆಯರು, ಈಗ ಒಂದಾಗಿದ್ದಾರೆ!
ಹಾಗೆ ಒಂದೇ ವೇದಿಕೆಯಲ್ಲಿ ಇಬ್ಬರನ್ನೂ ಒಟ್ಟಾಗಿ ನಿಲ್ಲಿಸಿದ ಖ್ಯಾತಿ ನಿರ್ದೇಶಕ ಎ.ಪಿ.ಅರ್ಜುನ್ ಗೆ ಸಲ್ಲಬೇಕು. ಚಡ್ಡಿ-ದೋಸ್ತ್ ಗಳಿಬ್ಬರು ಒಂದೇ ಸಮಯಕ್ಕೆ ಹಾಜರಾಗಿ, ಒಂದೇ ಫ್ರೇಮ್ ನಲ್ಲಿ ಸೆರೆ ಸಿಕ್ಕಿದ್ದು 'ರಾಟೆ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ. [ಅಮರಜೀವಿ ರಾಜ್ ಹಬ್ಬದಲ್ಲಿ ಕಿಚ್ಚ, ದಚ್ಚು ಮಾಡಿದ್ದೇನು?]
ಹಾವು-ಮುಂಗುಸಿ ಒಂದ್ಕಡೆ ಸೇರಲ್ಲ ಅಂತಿದ್ದವರಿಗೆ ಸುದೀಪ್-ದರ್ಶನ್ ಒಟ್ಟಾಗಿ 'ರಾಟೆ' ಚಿತ್ರದ ಆಡಿಯೋ ಬಿಡುಗಡೆ ಮಾಡಿ ಎಲ್ಲರ ಬಾಯಿಗೆ ಬೀಗ ಹಾಕಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಕೂಡ, ಇದೇ ಸುದೀಪ್ ಮತ್ತು ದರ್ಶನ್ ಜೊತೆ ನಿಂತುಕೊಂಡು ಪೋಸ್ ಕೊಟ್ಟಿರುವುದು, ಗಾಂಧಿನಗರದ ಎಂಟನೇ ಅದ್ಭುತ! [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
ಅಣ್ಣಾವ್ರ ಕುಟುಂಬದ ಕ್ಯಾಂಪ್ ನಲ್ಲಿರುವ ಯಶ್ ಗೆ, ಸುದೀಪ್-ದರ್ಶನ್ ಕಂಡರೆ ಆಗಲ್ಲ ಅನ್ನುವ ಗುಲ್ಲು ಬಹಳ ದಿನಗಳ ಹಿಂದೆಯೇ ಹಬ್ಬಿತ್ತು. ಯಾವುದು ಆಗುವುದೇ ಇಲ್ಲ ಅಂತ ಎಲ್ಲರು ಭಾವಸಿದ್ದರೋ, ಅದೆಲ್ಲಾ 'ರಾಟೆ' ಪ್ರಭಾವದಿಂದ ಆಗಿದೆ.
ಇದನ್ನೆಲ್ಲಾ ಕಣ್ತುಂಬಿಕೊಂಡ ಕರ್ನಾಟಕ ಮಹಾಜನತೆ 'ಎಲ್ಲವೂ ತಣ್ಣಗಾಗಿದೆ' ಅಂತ ನಿಟ್ಟುಸಿರುಬಿಟ್ಟಿದ್ದರೆ, ಗಾಸಿಪ್ ಪಂಡಿತರ ಹೊಟ್ಟೆಗೆ ಮಾತ್ರ ಬೆಂಕಿಬಿದ್ದಿದೆ. ಅದರ ಹೊಗೆ ಯಾವಾಗ, ಯಾವ ರೂಪದಲ್ಲಿ ಹೊರಬರುತ್ತದೋ ದೇವರೇ ಬಲ್ಲ! (ಫಿಲ್ಮಿಬೀಟ್ ಕನ್ನಡ)