Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Big News: ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ದಕ್ಷಿಣ ಭಾರತದ ಸಿನಿಮಾ
ಸೃಜನಶೀಲ ಸಿನಿಮಾಗಳ ಕಣಜ ಮಲಯಾಳಂ ಸಿನಿಮಾ ಉದ್ಯಮದಿಂದ ಆಸ್ಕರ್ ಪ್ರಶಸ್ತಿಗೆ 'ಜಲ್ಲಿಕಟ್ಟು' ಸಿನಿಮಾ ಆಯ್ಕೆಯಾಗಿದ್ದು, ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿರುವ ಸಿನಿಮಾ ಇದಾಗಿದೆ.
ಸೆಪ್ಟೆಂಬರ್ 2019 ರಂದು ಬಿಡುಗಡೆಯಾದ ಈ ಸಿನಿಮಾ ಬಹಳ ವಿಭಿನ್ನವಾದ ಕತೆ ಹೊಂದಿರುವ ಮಹತ್ವದ ಸಂದೇಶವನ್ನು ಕಟ್ಟಿಕೊಡುವ ಸಿನಿಮಾ ಆಗಿದೆ. ಸಿನಿಮಾವನ್ನು ಲಿಜೊ ಜೋಸ್ ಫೆಲ್ಲಿಸೆರಿ ನಿರ್ದೇಶಿಸಿದ್ದಾರೆ.
ಆಸ್ಕರ್ ಪ್ರಶಸ್ತಿಯ ವಿದೇಶಿ ಭಾಷಾ ಸಿನಿಮಾ ಕ್ಯಾಟಗರಿಗಾಗಿ ಭಾರತದಿಂದ 'ಜಲ್ಲಿಕಟ್ಟು' ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಸಿನಿಮಾವು ಅಂತರಾಷ್ಟ್ರೀಯ ಭಾಷಾ ಸಿನಿಮಾದ ಅಂತಿಮ ಸುತ್ತಿಗೆ ಆಯ್ಕೆ ಆಗಿ, ಅಲ್ಲಿ ಮತ್ತೆ ಕೆಲ ಸಿನಿಮಾಗಳ ನಡುವೆ ಸ್ಪರ್ಧೆ ಮಾಡಿ ಆಸ್ಕರ್ ಗೆಲ್ಲಬೇಕಿರುತ್ತದೆ.
27 ಸಿನಿಮಾಗಳ ನಡುವೆ ಜಲ್ಲಿಕಟ್ಟು ಸಿನಿಮಾವನ್ನು ಆಸ್ಕರ್ ಸ್ಪರ್ಧೆಗೆ ಕಳಿಸಲು ಆಯ್ಕೆ ಮಾಡಲಾಗಿದೆ. 'ಶಕುಂತಲಾ ದೇವಿ, ಚಪಾಕ್, ಗುಲಾಬೊ ಸಿತಾಬೊ, ಚಲಾಂಗ್ ಇನ್ನೂ ಹಲವು ಸಿನಿಮಾಗಳ ನಡುವೆ ಸ್ಪರ್ಧೆ ನಡೆದು ಕೊನೆಗೆ 'ಜಲ್ಲಿ ಕಟ್ಟು' ಸಿನಿಮಾವನ್ನು ಆಯ್ಕೆ ಮಾಡಲಾಗಿದೆ.
ಕಡಿಯಬೇಕಿದ್ದ ಎಮ್ಮೆಯೊಂದು ಒಂದು ದಿನ ವಧಾ ಸ್ಥಾನದಿಂದ ತಪ್ಪಿಸಿಕೊಂಡು ಊರ ಒಳಗೆ ನುಗ್ಗಿಬಿಡುತ್ತದೆ. ಕೋಣ ಕಡಿಯುವವನು ಕೋಣದ ಹಿಂದೆ ಬೀಳುತ್ತಾನೆ. ಅದು ಗ್ರಾಮದಲ್ಲೆಲ್ಲಾ ಓಡಾಡುತ್ತದೆ, ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಇಡೀಯ ಗ್ರಾಮವೇ ಎಮ್ಮೆಯನ್ನು ಹಿಡಿಯಲು ಪ್ರಯತ್ನಿಸುತ್ತದೆ.
Recommended Video
ಕೇಳಲು ಸರಳ ಕತೆಯಂತೆ ಇದು ಕಾಣುತ್ತದೆ ಆದರೆ ಕತೆ ಇರುವುದು ಕತೆಯ ರೂಪಕದಲ್ಲಿ. ಎಮ್ಮೆಯ ಪಾತ್ರ, ಹಳ್ಳಿಗರ ಸಂಭಾಷಣೆ, ಎಲ್ಲೆ ಸೃಷ್ಟಿಸುವ ಸಮಸ್ಯೆಗಳು ಹೀಗೆ ಎಲ್ಲವೂ ರೂಪಕಗಳನ್ನು ಒಳಗೊಂಡಿದೆ, ಹಾಗಾಗಿ ಇದೊಂದು ಅದ್ಭುತವಾದ ಸಿನಿಮಾ.