Don't Miss!
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಂಜನಗೂಡಿನಿಂದ ಬೆಂಗಳೂರಿಗೆ ನಂಜುಂಡ
ತನ್ನ ಹೆಂಡತಿ ಸುಂದರಿಯಾಗಿರುವುದೇ ನಾಯಕ ನಂಜುಂಡನ ಅನುಮಾನಕ್ಕೆ ಮೂಲ ಕಾರಣ. ಆಕೆಯನ್ನು ಯಾರು ಮಾತನಾಡಿಸಿದರೂ ಅನುಮಾನಿಸಿ, ಗೊಂದಲ ಉಂಟುಮಾಡಿಕೊಳ್ಳುತ್ತಾನೆ. ಉಳಿದವರ ಕಣ್ಣಲ್ಲಿ ಅಪಹಾಸ್ಯಕ್ಕೀಡಾಗುತ್ತಾನೆ. ಮಾನಸಿಕ ರೋಗಿಯೊಬ್ಬನ ಈ ಕಥೆಯನ್ನು ಹಾಸ್ಯದ ಟಚ್ ಕೊಟ್ಟು ನಿರ್ದೇಶಕ ಶ್ರೀನಿವಾಸಪ್ರಸಾದ್ ತಮ್ಮ ನಿರ್ದೇಶನದ 'ನಂಜನಗೂಡು ನಂಜುಂಡ' ಚಿತ್ರದಲ್ಲಿ ರಸವತ್ತಾಗಿ ನಿರೂಪಿಸುತ್ತಿದ್ದಾರೆ.
ಮಲಯಾಳಂನ 'ಒಡಕ್ಕು ನೌಕಿ ಎಂದಿರಂ' ಚಿತ್ರದ ಕಥೆ ಈ ಚಿತ್ರಕ್ಕೆ ಸ್ಪೂರ್ಥಿ. ಮೈಸೂರು ಸುತ್ತಮುತ್ತ 30 ದಿನಗಳ ಕಾಲ ಮಾತಿನ ಭಾಗ ಚಿತ್ರೀಕರಿಸಿರುವ ಚಿತ್ರ ತಂಡ ಕಳೆದ ವಾರ ನಂಜನಗೂಡಿನಲ್ಲಿ ನಾಯಕನ ಪರಿಚಯದ ಹಾಡನ್ನು ಚಿತ್ರೀಕರಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗಿದೆ. ನಾಲ್ಕುದಿನಗಳ ಕಾಲ ನಡೆದ ಈ ಹಾಡಿನ ಚಿತ್ರೀಕರಣದಲ್ಲಿ ನಾಯಕ ರವಿಶಂಕರ್, ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತು ಅಭಿನಯಿಸಿದ್ದಾರೆ.
ಜೊತೆಗೆ ನಾಯಕಿ ಹಂಸಿಣಿ ಹಾಗೂ 75 ಜನ ನೃತ್ಯ ಕಲಾವಿದರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬೆಂಗಳೂರಿನ ರಾಕ್ಲೈನ್ ಸ್ಟುಡಿಯೋದಲ್ಲಿ ಚಿತ್ರದ ಇನ್ನೊಂದು ಹಾಡಿಗೆ ಸೆಟ್ ನಿರ್ಮಿಸಲಾಗುತ್ತಿದ್ದು, ಅದರಲ್ಲಿ ನಾಯಕ, ನಾಯಕಿಯ ಡ್ಯುಯೆಟ್ ಹಾಡನ್ನು ಸದ್ಯದಲ್ಲೇ ಚಿತ್ರೀಕರಿಸಲಾಗುವುದು.
ಉದ್ಯಮಿ ಸುಭಾಷ್ ಕೂರ್ಗ್ ನಿರ್ಮಿಸುತ್ತಿರುವ ಈ ಚಿತ್ರದ ಆರು ಹಾಡುಗಳಿಗೆ ರವಿಚಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ರ ಛಾಯಾಗ್ರಹಣ ಇರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಸಿಲ್ಲಿಲಲ್ಲಿ ಖ್ಯಾತಿಯ ರವಿಶಂಕರ್, ನವನಾಯಕಿ ಹಂಸಿಣಿ, ಕೆ.ಎಸ್.ಎಲ್. ಸ್ವಾಮಿ, ನಾಗರಾಜ್ ಕೋಟೆ ಇದ್ದಾರೆ.