Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾರಕ ರೋಗ ಗೆದ್ದು ಬಂದ ಸ್ನೇಹಾ 'ಆಯುಷ್ಮಾನ್ ಭವ'
ತನ್ನ ಮೋಹಕ ಸೌಂದರ್ಯದಿಂದ ''ಜೂನಿಯರ್ ಐಶ್ವರ್ಯ ರೈ'' ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಸ್ನೇಹಾ ಉಲ್ಲಾಳ್ ಕೆಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಕಾಣಿಸಲೇ ಇಲ್ಲ. ಇದ್ದಕ್ಕಿದ್ದಂತೆ ಸಿನಿಮಾದಿಂದ ದೂರವಾಗಿದ್ದ ಸ್ನೇಹಾ ಉಲ್ಲಾಳ್ ಅವರಿಗೆ ಏನಾಯಿತು ಎಂಬುದು ಯಾರಿಗೂ ಗೊತ್ತಿರಲಿಲ್ಲ.
ಮೂಲತಃ ಮಂಗಳೂರಿನ ಈ ಚೆಲುವೆ ಕನ್ನಡ ಸೇರಿದಂತೆ, ತೆಲುಗು, ಹಿಂದಿ, ಹೀಗೆ ಬಹುಭಾಷೆಗಳಲ್ಲಿ ನಟಿಸಿದ್ದರು. ಆದ್ರೆ, ಸಡನ್ ಆಗಿ ಚಿತ್ರರಂಗದಿಂದ ದೂರು ಉಳಿದಿದ್ದು ಸಹಜವಾಗಿ ಆತಂಕ ಮೂಡಿಸಿತ್ತು.[ಮಲಯಾಳಂಗೆ ಮಂಗಳೂರು ಮೊಲ್ಲೆ ಸ್ನೇಹಾ ಉಲ್ಲಾಳ್]
ಆದ್ರೀಗ, ತಾನು ಇಷ್ಟು ದಿನ ಯಾಕೆ ಸಿನಿಮಾ ಮಾಡ್ಲಿಲ್ಲ ಎನ್ನುವುದನ್ನ ಸ್ವತಃ ಸ್ನೇಹಾ ಅವರೇ ತಿಳಿಸಿದ್ದಾರೆ. ಇತ್ತೀಚೆಗೆ ಮಾಧ್ಯಮದವರು ಜೊತೆ ಮಾತನಾಡಿದ ಸ್ನೇಹಾ, ತಾನು 'ಆಟೋ ಇಮ್ಯೂನ್ ಡಿಸಾರ್ಡರ್ ಕಾಯಿಲೆ'ಯಿಂದ ಬಳುತ್ತಿದ್ದೆ ಎಂಬ ಆತಂಕಕಾರಿ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ, ಸ್ನೇಹಾ ಅವರು ಈ ಕಾಯಿಲೆಯನ್ನ ಹೇಗೆ ಗೆದ್ದು ಬಂದರು ಎಂಬುದು ಮುಂದೆ ಓದಿ......
ನಾಲ್ಕು ವರ್ಷದಿಂದ ಆನಾರೋಗ್ಯ
[ಮತ್ತೆ ಮತ್ತೆ ಮತ್ತೇರಿಸುವಂಥ ಸ್ನೇಹಾ ಉಲ್ಲಾಳ್ ವಿಡಿಯೋ]
ಯಾವ ಕಾಯಿಲೆ
ಸ್ನೇಹಾ ಉಲ್ಲಾಳ್ ಅವರು 'ಆಟೋ ಇಮ್ಯೂನ್ ಡಿಸಾರ್ಡರ್' ಕಾಯಿಲೆಯಿಂದ ಬಳುತ್ತಿದ್ದರು. ಇದು ರಕ್ತ ಸಂಚಲನಕ್ಕೆ ಸಂಬಂಧಿಸಿದ ಕಾಯಿಲೆ. ಈ ಕಾಯಿಲೆಯಿಂದ ಸ್ನೇಹಾ ಅವರು ದೈಹಿಕವಾಗಿ ತುಂಬಾನೇ ಬಳಲಿದ್ದರಂತೆ.[ಮತ್ತೆ ಮತ್ತೆ ಮತ್ತೇರಿಸುವಂಥ ಸ್ನೇಹಾ ಉಲ್ಲಾಳ್ ವಿಡಿಯೋ ]
ಚಿಕಿತ್ಸೆಗಾಗಿ ವಿಶ್ರಾಂತಿ
ದೈಹಿಕವಾಗಿ ಬಲಹೀನಾವಾಗಿದ್ದ ಸ್ನೇಹಾ ಉಲ್ಲಾಳ್ ಅವರು ಮಾನಸಿಕವಾಗಿ ಶಕ್ತಿಯುತವಾಗಿದ್ದರಂತೆ. ಸ್ನೇಹಿತರು, ಕುಟುಂಬಸ್ಥರು ಎಲ್ಲರೂ ಧೈರ್ಯ ತುಂಬಿದ್ದರಂತೆ. ಹೀಗಾಗಿ, ನಿರಂತರವಾಗಿ ಚಿಕಿತ್ಸೆ ಪಡೆದುಕೊಂಡು, ಅದರ ಜತೆಗೆ ಯೋಗಾ, ವ್ಯಾಯಾಮ ಅಂತ ತಮ್ಮ ಆರೋಗ್ಯವನ್ನ ಸರಿಪಡಿಸಿಕೊಂಡರಂತೆ.
ಬಣ್ಣದ ಲೋಕಕ್ಕೆ ಕಮ್ ಬ್ಯಾಕ್
ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಸ್ನೇಹಾ ಈಗ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ ಶುರು ಮಾಡಿದ್ದಾರೆ. ಚರಣ್ ತೇಜ ಹಾಗೂ ಅಮಲಾ ಪೌಲ್ ಅಭಿನಯಿಸುತ್ತಿರುವ 'ಆಯುಷ್ಮಾನ್ ಭವ' ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ.
ಮಂಗಳೂರು ಹುಡುಗಿ ಸ್ನೇಹಾ
ಅಂದ್ಹಾಗೆ, ಸ್ನೇಹಾ ಉಲ್ಲಾಳ್ ಮೂಲತಃ ಮಂಗಳೂರಿನವರು. ಅಷ್ಟೇ ಅಲ್ಲದೇ ಕನ್ನಡದಲ್ಲೂ ಒಂದು ಸಿನಿಮಾ ಮಾಡಿದ್ದಾರೆ. ಮಧು ಬಂಗಾರಪ್ಪ ಅಭಿನಯದ 'ದೇವಿ' ಚಿತ್ರದಲ್ಲಿ ಸ್ನೇಹಾ ಅಭಿನಯಿಸಿದ್ದರು.
ಬಾಲಿವುಡ್ ನಿಂದ ಟಾಲಿವುಡ್ ಗೆ
2005 ರಲ್ಲಿ ಸಲ್ಮಾನ್ ಖಾನ್ ಅಭಿನಯದ 'ಲಕ್ಕಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಸ್ನೇಹಾ ಉಲ್ಲಾಳ್, 'ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಬಾಲಕೃಷ್ಣ, ನಾಗಾರ್ಜುನ ಅಂತಹ ನಟರ ಜೊತೆ ತೆರೆ ಹಂಚಿಕೊಂಡು ಯಶಸ್ಸು ಕಂಡರು.
ಜೂನಿಯರ್ ಐಶ್ವರ್ಯ ರೈ
ಸ್ನೇಹಾ ಉಲ್ಲಾಳ್ ಅವರನ್ನ ಚಿತ್ರ ಜಗತ್ತಿನಲ್ಲಿ ''ಜೂನಿಯರ್ ಐಶ್ವರ್ಯ ರೈ'' ಎಂದೇ ಕರೆಯುತ್ತಿದ್ದರು. ಯಾಕಂದ್ರೆ, ಸ್ನೇಹಾ ಉಲ್ಲಾಳ್ ಅವರು ಕಣ್ಣು ನೋಡಲು, ಯಥಾವತ್ತು ಐಶ್ವರ್ಯ ರೈ ಅವರಂತೆ ಕಾಣಿಸುತ್ತದೆ ಎಂಬ ಕಾರಣಕ್ಕೆ.