Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೈನಲ್ ಹಂತ ತಲುಪಿದ ಮೊದಲ ತಂಡವಾದ ಗಣೇಶ್ ಟೀಂ
'ಕನ್ನಡ ಕ್ರಿಕೆಟ್ ಕಪ್' ಸರಣಿಯ ನಾಲ್ಕು ಪಂದ್ಯಗಳು ನಿನ್ನೆ ನಡೆದಿದೆ. ಇವುಗಳಲ್ಲಿ ಗಣೇಶ್ ಸಾರಥ್ಯದ ಒಡೆಯರ್ ಚಾರ್ಜರ್ಸ್ ತಂಡ ಎರಡಕ್ಕೆ ಎರಡೂ ಪಂದ್ಯಗಳನ್ನು ಗೆದ್ದು ಫೈನಲ್ ಹಂತ ತಲುಪಿದೆ. ಸದ್ಯಕ್ಕೆ ಫೈನಲ್ ಹಂತ ತಲುಪಿದ ಮೊದಲ ತಂಡ ಇದಾಗಿದೆ.
ಆರಂಭದಲ್ಲಿ ಒಡೆಯರ್ ಚಾರ್ಜರ್ಸ್ ಹಾಗೂ ಕದಂಬ ಲಯನ್ಸ್ ನಡುವೆ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಗಣೇಶ್ ತಂಡ 4 ರನ್ ಗಳ ಅಂತರದಲ್ಲಿ ವಿಜಯ ಸಾಧಿಸಿತು. ಈ ಪಂದ್ಯ ಕೊನೆಯ ಬಾಲ್ ವರೆಗೆ ಕುತೂಹಲ ಮೂಡಿಸಿತ್ತು.
'ಹೆಬ್ಬುಲಿ' ಸುದೀಪ್ ಟೀಮ್ ಗೆ ಸಖತ್ತಾಗಿ 'ಚಮಕ್' ಕೊಟ್ಟ ಗಣೇಶ್ ತಂಡ.!
ಸರಣಿಯ ಮೂರನೇ ಪಂದ್ಯದಲ್ಲಿ ಗಣೇಶ್ ತಂಡ ಹಾಗೂ ಉಪೇಂದ್ರ ಅವರ ಹೊಯ್ಸಳ ಈಗಲ್ಸ್ ಸಮರ ಶುರು ಮಾಡಿದರು. ಈ ಪೈಕಿ ಮತ್ತೆ ಗಣೇಶ್ ಟೀಂ ಗೆದ್ದಿತು. ಎರಡಕ್ಕೆ ಎರಡೂ ಪಂದ್ಯಗಳಲ್ಲಿ ವಿಜಯ ಪತಾಕೆ ಹಾರಿಸಿದ ಒಡೆಯರ್ ಚಾರ್ಜರ್ ನೇರವಾಗಿ ಫೈನಲ್ ಗೆ ಹಂತ ತಲುಪಿತು.
ಅಂದಹಾಗೆ, ನಿನ್ನೆ ನೆಡೆದ ನಾಲ್ಕು ಪಂದ್ಯಗಳ ಪೈಕಿ ಶಿವಣ್ಣ ತಂಡ ಒಂದು, ಯಶ್ ತಂಡ ಒಂದು ಹಾಗೂ ಗಣೇಶ್ ತಂಡ ಎರಡು ಪಂದ್ಯಗಳನ್ನು ಗೆದ್ದಿದೆ. ಫೈನಲ್ ಪಂದ್ಯ ಇಂದು (ಭಾನುವಾರ) ರಾತ್ರಿ 8:15 ಕ್ಕೆ ನಡೆಯಲಿದೆ.
ಲಾಸ್ಟ್ ಬಾಲ್ ನಲ್ಲಿ ಶಿವಣ್ಣನ ತಂಡವನ್ನು ಸೋಲಿಸಿದ ರಾಜಾಹುಲಿ ಯಶ್
ಇಂದಿನ ಪಂದ್ಯಗಳು
ಐದನೇ ಪಂದ್ಯ : ಪುನೀತ್ ರಾಜ್ ಕುಮಾರ್ (ಗಂಗಾ ವಾರಿಯರ್ಸ್) v/s ಯಶ್ (ರಾಷ್ಟ್ರಕೂಟ ಪ್ಯಾಂಥರ್ಸ್)
ಆರನೇ ಪಂದ್ಯ : ಉಪೇಂದ್ರ (ಹೊಯ್ಸಳ ಈಗಲ್ಸ್) v/s ಸುದೀಪ್ (ಕದಂಬ ಲಯನ್ಸ್)