Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿನ್ನದ ಪದಕ ಗೆದ್ದ ಹಿಮಾದಾಸ್ ಗೆ ಶುಭಕೋರಿದ ಶ್ರೀಮುರಳಿ-ದುನಿಯಾ ವಿಜಿ
ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಂಡರ್ 20 ಕ್ರೀಡಾಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಹಿಮಾದಾಸ್ ಗೆ ದೇಶದಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಚಿರತೆಯ ವೇಗದಲ್ಲಿ ಗುರಿ ಮುಟ್ಟಿದ ಹಿಮಾದಾಸ್ ಅವರ ಓಟ ನೋಡಿ ಖ್ಯಾತ ಕ್ರೀಡಾ ಪಟುಗಳು, ಕ್ರಿಕೆಟ್ ಆಟಗಾರರು, ಬಾಲಿವುಡ್ ದಿಗ್ಗಜರು, ಸಿನಿಮಾ ನಟ ನಟಿಯರು ಥ್ರಿಲ್ ಆಗಿದ್ದಾರೆ.
ಇತ್ತ ನಮ್ಮ ಕನ್ನಡದ ಸಿನಿ ತಾರೆಯರು ಕೂಡ ಹಿಮಾದಾಸ್ ಗೆ ಸಲ್ಯೂಟ್ ಮಾಡಿದ್ದಾರೆ. ಬಡತನದಲ್ಲಿ ಬೆಳದು ಬಂದ ಹಿಮಾ ಮಾಡಿದ ಸಾಧನೆಗೆ ತಲೆಬಾಗಿದ್ದಾರೆ. ಅದರಲ್ಲೂ ನಟ ಶ್ರೀಮುರಳಿ ಮತ್ತು ದುನಿಯಾ ವಿಜಯ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಲ್ಯೂಟ್ ಮಾಡಿದ ಶ್ರೀಮುರಳಿ
ಹಿಮಾದಾಸ್ ಸಾಧನೆಗೆ ನನ್ನ ಸಲ್ಯೂಟ್. 18 ವರ್ಷದ ಹುಡುಗಿ ಎಷ್ಟು ಚೆನ್ನಾಗಿ ತನ್ನನ್ನು ತಾನು ಹ್ಯಾಂಡಲ್ ಮಾಡಿದ್ದಾಳೆ ಎಂದರೆ ನಿಜಕ್ಕೂ ಅದ್ಭುತ. ನನಗೆ ಅದನ್ನು ನೋಡಿ ಬಹಳ ಥ್ರಿಲ್ ಆಯಿತು. ಆಕೆ ಬಹಳ ಇಂಟೆಲಿಜೆಂಟ್, ದೈಹಿಕವಾಗಿ ಸಮರ್ಥಳು. ನಿಜಕ್ಕೂ ಹಿಮಾದಾಸ್ ಸಾಧನೆ ಅಮೇಜಿಂಗ್..''ಎಂದು ಶ್ರೀಮುರಳಿ ಹಾಡಿಹೊಗಳಿದ್ದಾರೆ.
ಹಿಮಾ ದಾಸ್ ದೇಶಭಕ್ತಿ ಮೆಚ್ಚಿಕೊಂಡ ಪ್ರಧಾನಿ ನರೇಂದ್ರ ಮೋದಿ
ದುನಿಯಾ ವಿಜಯ್
''ಅಸ್ಸಾಂ ಬಡ ಕುಟುಂಬದಲ್ಲಿ ಜನಿಸಿ ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದ ಹಿಮದಾಸ್ ಸಹೋದರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಇಂತಹ ಅಪ್ಪಟ ಪ್ರತಿಭೆಗಳಿಗೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡಬೇಕು. ಆ ನಿಟ್ಟಿನಲ್ಲಿ ನಮ್ಮ ರಾಜಕಾರಣಿಗಳು ಗಮನ ಹರಿಸಬೇಕು. ಹಿಮದಾಸ್ ರ ಸಾಧನೆ ಇನ್ನಷ್ಟು ಮಂದಿ ಸಹೋದರಿಯರಿಗೆ ಸ್ಫೂರ್ತಿಯಾಗಲಿ'' ಎಂದು ದುನಿಯಾ ವಿಜಯ್ ಆಶಿಸಿದ್ದಾರೆ.
ಶೂಟಿಂಗ್: ಭಾರತಕ್ಕೆ ಬಂಗಾರ ಗೆದ್ದ ಮನು ಭಾಕರ್-ಅನ್ಮೋಲ್ ಜೋಡಿ
ಅನುಷ್ಕಾ ಶರ್ಮಾ
ಬಾಲಿವುಡ್ ನಟಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಿಮಾದಾಸ್ ಸಾಧನೆ ಬಗ್ಗೆ ಟ್ವೀಟ್ ಮಾಡಿದ್ದು, ''ನೀನು ಅನೇಕ ಜನರಿಗೆ ಸ್ಫೂರ್ತಿಯಾಗಿದ್ದೀರಾ. ಇದು ಮಹಾನ್ ಸಾಧನೆ, ನಮ್ಮೆಲ್ಲರಿಗೂ ಹೆಮ್ಮೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಶಾರೂಖ್ ಫುಲ್ ಹ್ಯಾಪಿ
ಭಾರತದ ತ್ರಿವರ್ಣ ಧ್ವಜವನ್ನ ಫಿನ್ ಲ್ಯಾಂಡ್ ನಲ್ಲಿ ಹಾರಾಡಿಸಿದ ಹಿಮಾದಾಸ್ ಗೆ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಮನಪೂರ್ವಕವಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಹೇಶ್ ಬಾಬು
''ಭಾರತದ ಕ್ರೀಡೆಯ ಇತಿಹಾಸದಲ್ಲೇ ಇದು ಅತಿ ದೊಡ್ಡ ಸಾಧನೆ. ಹಿಮಾದಾಸ್ ಅವರ ಈ ಸಾಧನೆಗೆ ನಾವು ಹೆಮ್ಮೆಪಡಲೆ ಬೇಕು'' ಎಂದು ತೆಲುಗು ನಟ ಮಹೇಶ್ ಬಾಬು ಅಭಿಪ್ರಾಯಪಟ್ಟಿದ್ದಾರೆ.
ಅಥ್ಲಿಟ್ ಹಿಮಾ ದಾಸ್ಗೆ 10 ಲಕ್ಷ ಬಹುಮಾನ ಘೋಷಿಸಿದ ಪರಮೇಶ್ವರ್
ರಾಜಮೌಳಿ ಖುಷಿ
ಹಿಮಾದಾಸ್ ಅವರ ಸಾಧನೆಯ ಬಗ್ಗೆ ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಟ್ವೀಟ್ ಮಾಡಿದ್ದು, ''400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆಯ ಸಾಧನೆ ಭಾರತೀಯರ ಹೆಮ್ಮೆ'' ಎಂದಿದ್ದಾರೆ.