Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚುನಾವಣೆಯಲ್ಲಿ ಅಕ್ರಮ, ರೌಡಿಶೀಟರ್ ಒಳಬಂದಿದ್ದು ಹೇಗೆ: ಪ್ರಕಾಶ್ ರೈ ಪ್ರಶ್ನೆ
ತೆಲುಗು ಸಿನಿಮಾ ಉದ್ಯಮದ ಪ್ರತಿಷ್ಠಿತ ಚುನಾವಣೆಯಾಗಿದ್ದ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಮುಗಿದಿದ್ದರೂ ವಿವಾದಗಳು ಇನ್ನೂ ಮುಗಿದಿಲ್ಲ.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ್ ರೈ, ಮಂಚು ವಿಷ್ಣು ಎದುರು ಸೋತಿದ್ದಾರೆ. ಪ್ರಕಾಶ್ ರೈ ಸಿಂಡಿಕೇಟ್ನಿಂದ ಸ್ಪರ್ಧಿಸಿದ್ದ ಗೆದ್ದಿದ್ದ ಸದಸ್ಯರು ಸಹ ಫಲಿತಾಂಶ ಬಂದ ಬಳಿಕ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಮಂಚು ವಿಷ್ಣು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದೂ ಆಗಿದೆ.
ಆದರೆ ಮತದಾನಕ್ಕೆ ಮುಂಚೆ ಹಾಗೂ ಮತದಾನದ ದಿನ ಸಾಕಷ್ಟು ಗೊಂದಲಗಳು, ಗಲಾಟೆಗಳು ಆಗಿದ್ದವು. ಇದೀಗ ಪ್ರಕಾಶ್ ರೈ, ಅಕ್ರಮ ಮತದಾನದ ಆರೋಪಗಳನ್ನು ಮಾಡುತ್ತಿದ್ದು, ಮತಕೇಂದ್ರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಿ ಎಂದು ಚುನಾವಣಾ ಅಧಿಕಾರಿಗೆ ಮನವಿ ಮಾಡಿದ್ದಾರೆ. ಇಂದು ಟ್ವೀಟ್ ಮಾಡಿ, ಮತದಾನ ಕೇಂದ್ರದಲ್ಲಿ ರೌಡಿ ಶೀಟರ್ ಹೇಗೆ ಪ್ರವೇಶ ಮಾಡಿದ ಎಂದು ಪ್ರಶ್ನೆ ಮಾಡಿದ್ದಾರೆ.
ನುಕ್ಕಲ ಸಾಂಭ ಶಿವ ರಾವ್ ಎಂಬ ವ್ಯಕ್ತಿ 'ಮಾ' ಚುನಾವಣೆ ದಿವಸ ಮತಕೇಂದ್ರದಲ್ಲಿ ಹಾಜರಿದ್ದರು. ಅದಕ್ಕೆ ಸಂಬಂಧಿಸಿದ ಚಿತ್ರವನ್ನು ಪ್ರಕಾಶ್ ರೈ ಹಂಚಿಕೊಂಡಿದ್ದಾರೆ. ಅದೇ ವ್ಯಕ್ತಿ, ಮಂಚು ವಿಷ್ಣು ಜೊತೆಗೆ, ಹಿರಿಯ ನಟ ಮೋಹನ್ ಬಾಬು ಜೊತೆಗೆ ಹಾಗೂ ಸಿಎಂ ಜಗನ್ ಮೋಹನ್ ರೆಡ್ಡಿ ಜೊತೆಗೆ ಇರುವ ಚಿತ್ರವನ್ನೂ ಪ್ರಕಾಶ್ ರೈ ಹಂಚಿಕೊಂಡಿದ್ದಾರೆ.
''ಪ್ರಿಯ ಚುನಾವಣಾಧಿಕಾರಿ ಕೃಷ್ಣ ಮೋಹನ್ ಅವರೇ ಇದು ಕೇವಲ ಆರಂಭವಷ್ಟೆ. ನಮಗೆ ಸಿಸಿಟಿವಿ ಫುಟೇಜ್ ನೀಡಿ, ನಾವು ಜನರಿಗೆ ಹೇಳುತ್ತೇವೆ ಚುನಾವಣೆ ಹೇಗೆ ಆಗಿದೆಯೆಂದು'' ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಈ ಮೊದಲು ಅವರು ಚುನಾವಣಾಧಿಕಾರಿಗೆ ಪತ್ರ ಬರೆದು ಚುನಾವಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಕೋರಿದ್ದರು.
2017 ರಲ್ಲಿ ನುಕ್ಕಲ ಸಾಂಭಶಿವ ರಾವ್ ವಿರುದ್ಧ ದಾಖಲಾಗಿದ್ದ ಪ್ರಕರಣ ಮಾಹಿತಿ ಒಳಗೊಂಡ ಪತ್ರದ ಪ್ರತಿಯೊಂದನ್ನು ಹಂಚಿಕೊಂಡಿದ್ದಾರೆ ಪ್ರಕಾಶ್ ರೈ. ಅದರಲ್ಲಿ, ನುಕ್ಕಲ ಸಾಂಭ ಶಿವ ರಾವ್, ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಮಾಹಿತಿ ಇದೆ.