Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಿಗರ ಕನಸಿನ ಕನ್ಯೆಯಾಗಿ ಯಜ್ಞಾಶೆಟ್ಟಿ!
ಎದ್ದೇಳು ಮಂಜುನಾಥ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಜತೆ ನಟಿಸಿದ್ದ ಯಜ್ಞಾ ಶೆಟ್ಟಿ ಇದೀಗ ಕಿರುತೆರೆಯಲ್ಲಿ ಸುದ್ದಿ ಮಾಡಿದ್ದಾರೆ. ಕಸ್ತೂರಿ ವಾಹಿನಿಯ ರಿಯಾಲಿಟಿ ಶೋ 'ಡ್ರೀಮ್ ಗರ್ಲ್' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ನಗದು ಬಹುಮಾನವಾಗಿ ಯಜ್ಞಾಶೆಟ್ಟಿ ಅವರಿಗೆ ರು.5 ಲಕ್ಷಗಳನ್ನು ನೀಡಲಾಗಿದೆ.
ಫೆಬ್ರವರಿ 2009ರಿಂದ ಕಸ್ತೂರಿ ವಾಹಿನಿಯಲ್ಲಿ ಡ್ರೀಮ್ ಗರ್ಲ್ ರಿಯಾಲಿಟಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಡ್ರೀಮ್ ಗರ್ಲ್ ಪಟ್ಟಕ್ಕಾಗಿ ಒಟ್ಟು 12 ಮಂದಿ ಸ್ಪರ್ಧಿಗಳು ಕಣದಲ್ಲಿದ್ದರು. ಅವರನ್ನೆಲ್ಲಾ ಹಿಂದಿಕ್ಕಿರುವ ಯಜ್ಞಾಶೆಟ್ಟಿ ಅಂತಿಮವಾಗಿ ವಿಜಯ ಮಾಲೆ ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ. ಇದೀಗ ಅವರು ಕನಸಿನ ಕನ್ಯೆ!
ಎಪ್ಪತ್ತು ಕಂತುಗಳಲ್ಲಿ ಪ್ರಸಾರವಾದ ಡ್ರೀಮ್ ಗರ್ಲ್ ಕಾರ್ಯಕ್ರಮ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಅಂತಿಮ ಸುತ್ತಿನ ಹಣಾಹಣಿಗೆ ಯಜ್ಞಾ ಶೆಟ್ಟಿ ಜೊತೆಗೆ ಸ್ಫೂರ್ವಿ, ಪ್ರಿಯಾಂಕಾ ಮತ್ತು ವಿದ್ಯಾ ಸೆಣೆಸಿದ್ದರು. ಖ್ಯಾತ ನೃತ್ಯ ಸಂಯೋಜಕಿ ತಾರಾ, ಇಮ್ರಾನ್ ಸರ್ದಾರಿಯಾ ಮತ್ತು ನಿರ್ದೇಶಕ ಗುರುದತ್ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು.
ಅಂತಿಮ ಸುತ್ತಿನ ತೀರ್ಪುಗಾರರಾಗಿ 'ತಾಜ್ ಮಹಲ್' ಖ್ಯಾತಿಯ ಅಜಯ್ ರಾವ್ ಆಗಮಿಸಿದ್ದರು. ಎರಡನೇ ಹಂತದ ರಿಯಾಲಿಟಿ ಕಾರ್ಯಕ್ರಮ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಕಸ್ತೂರಿ ವಾಹಿನಿ ತಿಳಿಸಿದೆ. ಒಂದೆಡೆ ಎದ್ದೇಳು ಮಂಜುನಾಥ ಚಿತ್ರ ಯಶಸ್ಸಿನ ಖುಷಿ ಮತ್ತೊಂದೆಡೆ ಡ್ರೀಮ್ ಗರ್ಲ್ ಆದ ಸಂತೋಷ ಯಜ್ಞಶೆಟ್ಟಿ ಪಾಲಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)