Don't Miss!
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಂದೆ ಸಿ.ಎಸ್.ಪಿ ಮುಂದೆ 'ಮಗಳು ಜಾನಕಿ' ಮದುವೆ.!
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿ ಇದೀಗ ರೋಚಕ ಘಟ್ಟ ತಲುಪಿದೆ. ಇಪ್ಪತ್ತು ವರ್ಷಗಳ ಹಿಂದೆ ವಿಚ್ಛೇದನ ಕೊಟ್ಟು ಪುಟಾಣಿ ಜಾನಕಿ ಜೊತೆಗೆ ರಶ್ಮಿ ಹೊರಟು ಹೋದ್ಮೇಲೆ, 'ಮಗಳು ಜಾನಕಿ'ಯ ಮುಖ ದರ್ಶನ ತಂದೆ ಸಿ.ಎಸ್.ಪಿಗೆ ಆಗೇ ಇಲ್ಲ.
ಜಾನಕಿ ಹೇಗಿದ್ದಾಳೆ, ಹೇಗೆ ಕಾಣ್ತಾಳೆ ಅನ್ನೋದು ಸಿ.ಎಸ್.ಪಿಗೆ ಗೊತ್ತೇ ಇಲ್ಲ. ಇತ್ತ ತನ್ನ ನಿಜವಾದ ತಂದೆ ಕ್ರಿಮಿನಲ್ ಲಾಯರ್ ಚಂದ್ರಶೇಖರ್ ಪ್ರಸಾದ್ (ಸಿ.ಎಸ್.ಪಿ) ಅನ್ನೋ ಸತ್ಯ ಕೂಡ ಜಾನಕಿಗೆ ಅರಿವಿಲ್ಲ.
ಹೀಗಿರುವಾಗಲೇ, ವಿಧಿ ಲಿಖಿತ ಎಂಬಂತೆ 'ಮಗಳು ಜಾನಕಿ' ಹಾಗೂ ತಂದೆ ಸಿ.ಎಸ್.ಪಿ ಮುಖಾಮುಖಿ ಆಗಿದ್ದಾರೆ. ಜಾನಕಿಯ ಮದುವೆ ಮಾಡಿಸಲು ಸಿ.ಎಸ್.ಪಿ ಮನೆಗೆ ಜಾನಕಿ-ಆನಂದ್ ರನ್ನ ಸ್ನೇಹಿತೆ ಲಕ್ಷ್ಮಿ ಕರೆದುಕೊಂಡು ಬಂದಿದ್ದಾಳೆ.
ಒಳ್ಳೆ ಹುಡುಗನ ಜೊತೆಗೆ ಜಾನಕಿ ಮದುವೆ ಆದರೆ ಸಾಕು ಎಂಬುದು ಸಿ.ಎಸ್.ಪಿ ಬಯಕೆ ಆಗಿತ್ತು. ಆ ಬಯಕೆ ಇದೀಗ ಸಿ.ಎಸ್.ಪಿ ಸಮಕ್ಷಮದಲ್ಲಿಯೇ ನೆರವೇರಲಿದೆ. ಮುಂದೆ ಓದಿರಿ...
ದೂರ ಇರಬೇಕು ಅಂದುಕೊಂಡರೂ ಆಗುತ್ತಿಲ್ಲ.!
ಚಂದು ಭಾರ್ಗಿ ಹಾಗೂ ಕುಟುಂಬದಿಂದ ದೂರ ಇರಬೇಕು ಅಂತ ಸಿ.ಎಸ್.ಪಿ ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯ ಆಗುತ್ತಿಲ್ಲ. ಚಂದು ಭಾರ್ಗಿ ವಿರುದ್ಧ ಒಂದಲ್ಲಾ ಒಂದು ಕೇಸ್ ಸಿ.ಎಸ್.ಪಿ ರನ್ನ ಹುಡುಕಿಕೊಂಡು ಬರುತ್ತಿದೆ. ಇದೀಗ, ಜಾನಕಿ ಕೂಡ ಸಿ.ಎಸ್.ಪಿ ರನ್ನ ಅರಸಿ ಬಂದಿದ್ದಾಳೆ.
'ಮಗಳು ಜಾನಕಿ': ಮರಳುಗಾಡಿನಲ್ಲಿ ವೀಕ್ಷಕರಿಗೆ ಒಯಾಸಿಸ್ ಸಿಕ್ಕ ಹಾಗಿದೆ.!
ಅಂತೂ ಸಿ.ಎಸ್.ಪಿ ಮನೆ ಸೇರಿದ ಜಾನಕಿ
ಕುಟುಂಬದವರ ಕಣ್ತಪ್ಪಿಸಿ, ದಾರಿ ಮಧ್ಯೆ ಎದುರಾದ ಗಂಡಾಂತರಗಳಿಂದ ತಪ್ಪಿಸಿಕೊಂಡು ಜಾನಕಿ-ಆನಂದ್ ರನ್ನ ಸಿ.ಎಸ್.ಪಿ ಮನೆಗೆ ತಲುಪಿಸುವಲ್ಲಿ ಗೆಳತಿ ಲಕ್ಷ್ಮಿ ಯಶಸ್ವಿ ಆದಳು.
ಜಾನಕಿ ಜೊತೆಗಿನ ಮದುವೆಗೆ ನಿರಂಜನ್ ಒಲ್ಲೆ.?
ಸಿ.ಎಸ್.ಪಿ ಮುಂದೆ ಸುಳ್ಳು.!
ಸಿ.ಎಸ್.ಪಿಗೂ ಚಂದು ಭಾರ್ಗಿಗೂ ಆಗ್ಬರಲ್ಲ ಎಂಬ ಸತ್ಯ ಜಾನಕಿಗೆ ಗೊತ್ತು. ಹೀಗಾಗಿ ತಾನು ಚಂದು ಭಾರ್ಗಿ ಮಗಳು ಅಂತ ಸಿ.ಎಸ್.ಪಿ ಹೇಳದೇ ಇರಲು ಜಾನಕಿ ನಿರ್ಧರಿಸಿದಳು. ಅದರಂತೆ ಸಿ.ಎಸ್.ಪಿ ಮುಂದೆ ಲಕ್ಷ್ಮಿ ಸುಳ್ಳು ಹೇಳಿದಳು.
ಗಂಟು-ಮೂಟೆ ಕಟ್ಟಿಕೊಂಡು ರಾತ್ರೋರಾತ್ರಿ ಮನೆಯಿಂದ ಹೊರಬಂದ ಮಗಳು 'ಜಾನಕಿ'.!
ಕರುಳು ಅರಿಯದೆ.?
''ಕಣ್ಣರಿಯದಿದ್ದರೇನು...ಕರುಳು ಅರಿಯದೇ.?'' ಎಂಬ ಮಾತಿನಂತೆ ಜಾನಕಿಯನ್ನ ನೋಡಿದ ಕೂಡಲೆ ತಂದೆ ಸಿ.ಎಸ್.ಪಿ ಮನದಲ್ಲಿ ಏನೋ ಒಂಥರಾ ತಳಮಳ. ''ನನ್ನ ಹೆಸರು ಚಾರುಲತಾ'' ಅಂತ ಜಾನಕಿ ಸುಳ್ಳು ಹೇಳಿದ್ದು ಸಿ.ಎಸ್.ಪಿಗೆ ಗೊತ್ತಾಯಿತು.
ಸಿ.ಎಸ್.ಪಿ ಮನೆಗೆ ರಶ್ಮಿ
ಇತ್ತ ಜಾನಕಿ ಹಾಗೂ ಆನಂದ್, ಸಿ.ಎಸ್.ಪಿ ಮನೆಗೆ ಹೋಗಿರುವುದು ಚಂದು ಭಾರ್ಗಿ ಹಾಗೂ ರಶ್ಮಿಗೆ ಖಾತ್ರಿ ಆಗಿದೆ. ಹೀಗಾಗಿ, ನೇರವಾಗಿ ಹೋಗಿ ಸಿ.ಎಸ್.ಪಿ ಜೊತೆಗೆ ಮಾತನಾಡಲು ರಶ್ಮಿಗೆ ಚಂದು ಭಾರ್ಗಿ ಸೂಚಿಸಿದ್ದಾರೆ.
ಮುಂದೇನಾಗುತ್ತೋ.?
ಅತ್ತ ಜಾನಕಿ, ಸಿ.ಎಸ್.ಪಿ ಮುಂದೆ ಸುಳ್ಳು ಹೇಳಿರಬಹುದು. ಆದ್ರೆ, ರಶ್ಮಿ ಬಂದ್ಮೇಲೆ ಸಿ.ಎಸ್.ಪಿಗೆ ಸತ್ಯ ಗೊತ್ತಾಗಲೇಬೇಕಲ್ಲವೇ.? ಸಿ.ಎಸ್.ಪಿ ಸಮ್ಮುಖದಲ್ಲಿ 'ಮಗಳು ಜಾನಕಿ' ಮದುವೆ ನಡೆಯುತ್ತಾ.? ಜಾನಕಿಗೆ ಸತ್ಯ ಗೊತ್ತಾಗುತ್ತಾ.? ಉತ್ತರ ಇಂದಿನ ಸಂಚಿಕೆಯಲ್ಲಿ....