Don't Miss!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈಗ ರಾಣಿ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ಕಷ್ಟ ಕಷ್ಟ.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ದೊಡ್ಡ ತಿರುವು ಸಿಗುವ ಸೂಚನೆ ಸಿಕ್ಕಿದೆ. ಇಷ್ಟು ದಿನ ರಮಣ್ ಮನೆಯಲ್ಲಿ ಸಿತಾರ ದೇವಿ ಆಜ್ಞೆ ಮೇರೆಗೆ 'ಅವನಿ' ಅಂತ ಹೇಳಿಕೊಂಡು ಡ್ರಾಮಾ ಮಾಡ್ತಿದ್ದ ರಾಣಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುವ ಸಮಯ ಹತ್ತಿರಕ್ಕೆ ಬಂದಿದೆ.
''ಮನೆಯಲ್ಲಿ ನಾನೇ ಪವರ್ ಫುಲ್'' ಅಂತ ತೋರಿಸಿಕೊಳ್ಳಲು ರಾಣಿ ಮಾಡುತ್ತಿದ್ದ ನಾಟಕ ದೀಪಿಕಾಗೆ ಇಷ್ಟ ಆಗಲಿಲ್ಲ. ಅದ್ರಲ್ಲೂ, ದೀಪಿಕಾ ಕಪಾಳಕ್ಕೆ ರಾಣಿ ಹೊಡೆದ ಮೇಲೆ ಸೇಡು ತೀರಿಸಿಕೊಳ್ಳಲು ದೀಪಿಕಾ ಸಜ್ಜಾದಳು.
ಹೇಗಾದರೂ ಮಾಡಿ ರಾಣಿಯನ್ನ ಮನೆಯಿಂದ ಹೊರಗೆ ಹಾಕಬೇಕು ಅಂತ ಸಂಚು ರೂಪಿಸಿ ರಾಣಿಯೂ ಸೇರಿದಂತೆ ಹೆಣ್ಮಕ್ಕಳ ಗ್ಯಾಂಗ್ ನ ದೀಪಿಕಾ ಪಾರ್ಕ್ ಗೆ ಕರೆದುಕೊಂಡು ಬಂದಳು.
ಜಿದ್ದಿಗೆ ಬಿದ್ದ ದೀಪು: ಇವತ್ತಾದರೂ ರಾಣಿ ಬಂಡವಾಳ ಬಯಲು.?
ರಾಣಿ ಬಾಯ್ ಫ್ರೆಂಡ್ 'ಮಾದ'ನನ್ನೂ ಪಾರ್ಕ್ ಗೆ ಬರುವ ಹಾಗೆ ದೀಪಿಕಾ ನೋಡಿಕೊಂಡಳು. ಇಷ್ಟೆಲ್ಲ ಆದ್ಮೇಲೆ, ರಾಣಿ-ಮಾದ ಪಾರ್ಕ್ ನಲ್ಲಿ ಭೇಟಿ ಆದರು. ರಾಣಿ-ಮಾದ ಮಾತನಾಡುತ್ತಿದ್ದನ್ನ ನೋಡಿ ರಾಧಾ ಹಾಗೂ ಅನ್ವಿತಾ ಶಾಕ್ ಆಗಿದ್ದಾರೆ.
ಮಾದನ ಜೊತೆಗೆ ರಾಣಿ ಕಾಣಿಸಿಕೊಂಡಿರುವುದು ಇದು ಎರಡನೇ ಬಾರಿ. ಆದ್ದರಿಂದ, ಈಗ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ರಾಣಿಗೆ ಕಷ್ಟಕಷ್ಟ.
'ರಾಣಿ' ಮುಖವಾಡ 'ರಾಧಾ' ಮುಂದೆ ಕಳಚಿ ಬೀಳುತ್ತಾ.?
ಕೆಲ ಆಸ್ತಿಗಳನ್ನ 'ಅವನಿ' ಹೆಸರಿಗೆ ರಮಣ್ ಬರೆಯುವ ಮುನ್ನ ರಾಣಿ ಮುಖವಾಡ ಕಳಚಿ ಬೀಳಬೇಕು. ಇದಕ್ಕಾಗಿ ದಿನಕರ್ ಕೂಡ ಹರಸಾಹಸ ಮಾಡುತ್ತಿದ್ದಾರೆ. ಇನ್ನೂ ದೀಪಿಕಾ ಕೂಡ ರಾಣಿ ವಿರುದ್ದ ತಿರುಗಿ ಬಿದ್ದಿರುವುದರಿಂದ ರಾಣಿ ಎಸ್ಕೇಪ್ ಆಗುವುದು ಆಲ್ಮೋಸ್ಟ್ ಡೌಟೇ.!
ಈಗಲಾದರೂ, ರಾಣಿ ಸಿಕ್ಕಿಬಿದ್ದು ನಿಜವಾದ 'ಅವನಿ' ಮನೆ ಸೇರಿದರೆ ಮನೆ ಮಂದಿಗಿಂತ ವೀಕ್ಷಕರಿಗೆ ಹೆಚ್ಚು ಖುಷಿ ಅಲ್ಲವೇ.?!