Don't Miss!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತ್ನಿಯನ್ನು ದಿಢೀರನೆ ಆಸ್ಪತ್ರೆಗೆ ಕರೆದೊಯ್ದ ನಟ ಅಕ್ಷಯ ಕುಮಾರ್: ವಿಡಿಯೋ ವೈರಲ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೊರೊನಾ ವಿರುದ್ಧ ಹೋರಾಟಕ್ಕೆ 25 ಕೋಟಿ ದೇಣಿಗೆ ನೀಡಿರುವ ಸುದ್ದಿ ಸದ್ಯ ವೈರಲ್ ಆಗುತ್ತಿದೆ.
Recommended Video
ಇದರ ಬೆನ್ನಲ್ಲೆ ಈಗ ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾರನ್ನು ದಿಢೀರನೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತ್ನಿಯನ್ನು ಕೂರಿಸಿಕೊಂಡು ಸ್ವತಹ ಅಕ್ಷಯ್ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಮಾಸ್ಕ್ ಧರಿಸಿ ಕಾರು ಚಲಾಯಿಸುತ್ತಿರುವ ಅಕ್ಷಯ್ ಕುಮಾರ್ ವಿಡಿಯೋವನ್ನು ಟ್ವಿಂಕಲ್ ಖನ್ನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಪತಿಯನ್ನು ಕಾರ್ ಚಾಲಕನೆಂದು ಕಿಚಾಯಿಸಿದ ಟ್ವಿಂಕಲ್
"ನನ್ನ ಚಾಲಕ ನನ್ನನ್ನು ಚಾಂದನಿ ಚೌಕ್ ನಿಂದ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ" ಎಂದು ಪತಿ ಅಕ್ಷಯ್ ಕುಮಾರ್ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ.
ಆಸ್ಪತ್ರೆಗೆ ಹೋಗಲು ಕೊರೊನಾ ಕಾರಣವಲ್ಲ ಎಂದ ಟ್ವಿಂಕಲ್
ಟ್ವಿಂಕಲ್ ಖನ್ನಾ ದಿಢೀರ್ ಆಸ್ಪತ್ರೆಗೆ ಹೋಗಿದ್ದೇಕೆ? ಕೊರೊನಾ ಸೋಂಕು ತಗುಲಿದೆಯೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಟ್ವಿಂಕಲ್ ಖನ್ನಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಕಾರಿನಲ್ಲಿ ಹೋಗುತ್ತಿರುವಾಗ ವಿಡಿಯೋ ಮಾಡಿರುವ ಅಕ್ಷಯ್ ಪತ್ನಿ "ನಾನು ಆಸ್ಪತ್ರೆಗೆ ಹೋಗಲು ಕೊರೊನಾ ಕಾರಣವಲ್ಲ. ಕಾಲು ಮುರಿದುಕೊಂಡಿದ್ದೇನೆ" ಎಂದು ಹೇಳಿ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಲಾಕ್ ಡೌನ್ ಕಾರಣಕ್ಕೆ ರಸ್ತೆಗಳು ಖಾಲಿ-ಖಾಲಿ
"ಲಾಕ್ ಡೌನ್ ಹಿನ್ನಲೆ ರಸ್ತೆಗಳು ಖಾಲಿ ಖಾಲಿ ಆಗಿವೆ. ಹಾಗಾಗಿ ಆಸ್ಪತ್ರೆಗೆ ಬೇಗನೆ ಹೋಗಿ ಬರಲು ಸಾಧ್ಯವಾಯಿತು. ಅಲ್ಲಲ್ಲಿ ಪಾರಿವಾಳಗಳು, ಕಾಗೆಗಳು ಕಂಡು ಬಂದವು ಸಂತೋಷವಾಯಿತು" ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಜೊತೆಗೆ ಕಾಲು ಮುರಿದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
25 ಕೋಟಿ ದೇಣಿಗೆ ನೀಡಿರುವ ಅಕ್ಷಯ್ ಕುಮಾರ್
ಕೊರೊನಾ ವಿರುದ್ಧ ಹೋರಾಡಲು ನಟ ಅಕ್ಷಯ್ ಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ 25 ಕೋಟಿ ರೂ ದೇಣಿಗೆ ನೀಡಿದ್ದಾರೆ. ಪತಿ ಮಾಡಿರುವ ಕಾರ್ಯಕ್ಕೆ ಪತ್ನಿ ಟ್ವಿಂಕಲ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಸಹ ಮಾಡಿದ್ದರು.