Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಗೆ ಕೃತಜ್ಞತೆ ಅನ್ನೋದೇ ಇಲ್ಲಾ, ಗಣೇಶ್
ನಾನು ನಿರ್ಮಿಸಿದ ದೇವರಮಗ ಚಿತ್ರದಲ್ಲಿ ದರ್ಶನ್ ಆವರಿಗೆ ಅವಕಾಶ ಕೊಡಲು ಕಷ್ಟಪಟ್ಟೆ. ದರ್ಶನ್ ಗೆ ಮೊದಲ ಬಾರಿ ದೊಡ್ಡ ಬ್ಯಾನರ್ ನಲ್ಲಿ ಅವಕಾಶ ಕೊಡಿಸಿದವನು ನಾನು. ದೇವರಮಗ ಚಿತ್ರ ಮಾಡುವಾಗ ವಿಲನ್ ಪಾತ್ರಕ್ಕೆ ದರ್ಶನ್ ಆಯ್ಕೆ ಮಾಡಿದೆ. ನಿರ್ದೇಶಕ ಡಿ ರಾಜೇಂದ್ರ ಸಿಂಗ್ ಬಾಬು ಇವರೆಲ್ಲಾ ಆಗಲ್ಲ, ಬಾಂಬೆಯವರೇ ಬೇಕಂದ್ರು. ಅವರನ್ನು ಹೇಗೋ ಕನ್ವಿನ್ಸ್ ಮಾಡಿಸಿ ದರ್ಶನ್ ಗೆ ಅವಕಾಶ ಕೊಡಿಸಿದೆ.
ಎಂಜಿ ರೋಡಲ್ಲಿ ನಲವತ್ತು ಸಾವಿರ ನನ್ನ ಸ್ವಂತ ಜೇಬಿನಿಂದ ಖರ್ಚು ಮಾಡಿ ಒಳ್ಳೊಳ್ಳೆ ಬಟ್ಟೆ ಕೊಡಿಸಿದೆ. ಆದರೆ ದರ್ಶನ್ ಮಾಡುತ್ತಿರುವುದು ಏನು? ಯಾರು ಎಷ್ಟು ದುಡ್ಡು ಕೊಡ್ತಾರೆ ಅವರಿಗೆ ಮಾತ್ರ ಕಾಲ್ ಶೀಟ್ ನೀಡುತ್ತಿದ್ದಾರೆ.ಅವತ್ತು ಅವಕಾಶ ಕೊಟ್ಟ ನನಗೆ ಇಂದು ಒಂದು ಕಾಲ್ ಶೀಟ್ ಕೇಳಿದ್ರೆ ಕೊಡ್ತಾ ಇಲ್ಲಾ ಎಂದು ಹೇಳಿಕೆ ನೀಡಿದ್ದಾರೆ.
ಹೊಸ ಹೊಸ ನಿರ್ಮಾಪಕರು ಎಲ್ಲಿಂದಲೋ ದುಡ್ಡು ಹೊಂದಿಸಿ ಚಿತ್ರ ತೆಗೆಯುತ್ತಾರೆ. ನಾವು ಕಷ್ಟಪಟ್ಟು ಇಷ್ಟು ಸಂಭಾವನೆ ಅಂತಾ ಫಿಕ್ಸ್ ಮಾಡ್ಸಿರ್ತೀವಿ. ಹತ್ತು ಲಕ್ಷ ಜಾಸ್ತಿ ಕೊಟ್ಟು ನಮ್ಮ ಕೂಳಿಗೆ ಹೊಸ ನಿರ್ಮಾಪಕರು ಕಲ್ಲು ಹಾಕುತ್ತಿದ್ದಾರೆ.
ನಮಗೆ ಸಿನಿಮಾ ಒಂದೇ ಗೊತ್ತಿರುವುದು. ಅದನ್ನು ಬಿಟ್ಟು ಬೇರೇನೂ ಬರಲ್ಲ. ಇಲ್ಲೀ ದುಡೀತೀವಿ, ಇಲ್ಲೀ ಹಾಕ್ತೀವಿ. ಆದರೆ ಕಷ್ಟ ಕಾಲದಲ್ಲಿ ಕೈಹಿಡಿದ ನಿರ್ಮಾಪಕರನ್ನು ಕಡೆಗಣಿಸುವುದು ಸರಿಯಲ್ಲ ಎಂದು ನಿರ್ಮಾಪಕ ಗಣೇಶ್ ಹೇಳಿದ್ದಾರೆ.