Don't Miss!
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Ram Gopal Varma: ಅಪ್ಪಟ ನಾಸ್ತಿಕನ ಕೈಲಿ ಕೈ ಮುಗಿಸಿಕೊಂಡ ಅಪ್ಪು
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಪ್ಪಟ ನಾಸ್ತಿಕ. ಕೇವಲ ನಾಸ್ತಿಕ ಮಾತ್ರವಲ್ಲ, ಮಾನವ ಸಂಬಂಧಗಳು, ಪ್ರೀತಿ, ಸೌಹಾರ್ಧ ಇತರೆಗಳ ಬಗ್ಗೆ ವರ್ಮಾರದ್ದು ಭಿನ್ನ ನಿಲವು. ಇಂಥಹಾ ವಿಕ್ಷಿಪ್ತ ವ್ಯಕ್ತಿ ಸಹ ಇಂದು ಅಪ್ಪು ಸಮಾಧಿಗೆ ತಲೆ ಬಾಗಿ ನಮಸ್ಕರಿಸಿದ್ದಾರೆ.
ರಾಮ್ ಗೋಪಾಲ್ ವರ್ಮಾ ಇಂದು ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿದ್ದರು. ಅಪ್ಪು ಸಮಾಧಿಗೆ ಕೈ ಮುಗಿದು, ಅಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದಾರೆ.
James Vs RRR: 'ಜೇಮ್ಸ್' ವಿವಾದ ಬಗೆಹರಿಸಿದ ಶಿವಣ್ಣ: ಎಷ್ಟು ಥಿಯೇಟರ್ನಲ್ಲಿ ಮುಂದುವರೆಯುತ್ತೆ ಅಪ್ಪು ಸಿನಿಮಾ?
ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಾಮ್ ಗೋಪಾಲ್ ವರ್ಮಾ, ''ಡಾ ರಾಜ್ಕುಮಾರ್ ಕುಟುಂಬದ ಜೊತೆಗೆ ನನ್ನದು ಹಳೆಯ ನಂಟು. ನಾನು ಶಿವರಾಜ್ ಕುಮಾರ್ ಜೊತೆಗೆ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಮಾಡಿದ್ದೇನೆ. ಸಿನಿಮಾದ ಮೇಕಿಂಗ್ ಸಮಯದಲ್ಲಿ ನಾನು ಪುನೀತ್ ರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದೆ'' ಎಂದು ನೆನಪು ಮಾಡಿಕೊಂಡಿದ್ದಾರೆ.
Puneeth Rajkumar Fans: ಪುನೀತ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕೆ ಅಪ್ಪು ಪ್ಯಾನ್ಸ್ಗೆ ಕ್ಷಮೆ ಕೇಳಿದ ಹುಡುಗ
ಇಂದು ನನಗೆ ಭಿನ್ನ ಅನುಭೂತಿಯಾಯಿತು: ವರ್ಮಾ
''ಈಗಲೂ ಸಹ ನನಗೆ ಪುನೀತ್ ಇಲ್ಲ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ಅನ್ನು ಈ ಸ್ಥಿತಿಯಲ್ಲಿ ನೋಡಲು ನನಗೆ ಕಷ್ಟವಾಗುತ್ತಿದೆ. ಇಂದು ಇಲ್ಲಿಗೆ ಬಂದು ನನಗೆ ಭಿನ್ನ ಅನುಭೂತಿಯಾಯಿತು. ಆಧ್ಯಾತ್ಮಿಕ ಲೋಕಕ್ಕೆ ಬಂದಂತೆ ಭಾಸವಾಯಿತು. ಒಳ್ಳೆಯ ವಿಷಯವೆಂದರೆ ಪುನೀತ್ ಸದಾ ಕಾಲ ಕರ್ನಾಟಕ ಜನರ ಹೃದಯದಲ್ಲಿ ಇರಲಿದ್ದಾರೆ'' ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ. ಇವರ ಬಾಯಿಯಿಂದ ಈ ರೀತಿಯ ಮಾತುಗಳು ಹಿಂದೆಂದೂ ಬಂದಿರಲಿಲ್ಲ.
ಅಪ್ಪು ಅಭಿಮಾನಿಗಳಿಗೆ ದೊಡ್ಡ ನಷ್ಟವಾಗಿದೆ: ವರ್ಮಾ
''ಅಪ್ಪು ಅಭಿಮಾನಿಗಳು, ಕುಟುಂಬಕ್ಕೆ ಆಗಿರುವ ನಷ್ಟದ ಬಗ್ಗೆ ನನಗೆ ದುಃಖವಿದೆ. ಆದರೆ ದೇವರಿಗೆ ಬೇರೆಯ ಯೋಜನೆಗಳಿದ್ದವು ಎನಿಸುತ್ತದೆ. ಈ ಮುಂದೆ ಅವರು ಇದ್ದಿದ್ದಕ್ಕಿಂತಲೂ ಒಳ್ಳೆಯ, ಘನವಾದ ಜಾಗದಲ್ಲಿ ಈಗ ಇದ್ದಾರೆ ಎಂಬ ನಂಬಿಕೆ ಇದೆ'' ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
ಪುನೀತ್ ದೊಡ್ಡ ಸ್ಟಾರ್ ನಟ: ವರ್ಮಾ
''ಪುನೀತ್ ಎಂಥಹಾ ಒಳ್ಳೆಯ ನಟರಾಗಿದ್ದರು ಎಂಬುದನ್ನು ನಾನು ಮತ್ತೆ ಹೇಳುವ ಅವಶ್ಯಕತೆ ಇಲ್ಲ. ತಾವೆಂತ ದೊಡ್ಡ ಸ್ಟಾರ್ ಎಂಬುದನ್ನು ಅವರು ಈಗಾಗಲೇ ಹಲವು ಬಾರಿ ಪ್ರೂವ್ ಮಾಡಿದ್ದಾರೆ. ಅವರು ನಿಧನರಾದ ಬಳಿಕವೂ 'ಜೇಮ್ಸ್' ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ವಿಶೇಷ ಇಂಟ್ರೊಡಕ್ಷನ್ಗಳು ಬೇಕಾಗದ ರೀತಿಯ ನಟ ಹಾಗೂ ವ್ಯಕ್ತಿ ಪುನೀತ್ ರಾಜ್ಕುಮಾರ್'' ಎಂದು ಹೊಗಳಿದರು ರಾಮ್ ಗೋಪಾಲ್ ವರ್ಮಾ. ವಿಕ್ಷಿಪ್ತ ವ್ಯಕ್ತಿ ಎಂದೇ ಕರೆಯಲಾಗುವ ರಾಮ್ ಗೋಪಾಲ್ ವರ್ಮಾ ಯಾವುದೇ ವ್ಯಕ್ತಿಯನ್ನು ಹೊಗಳುವುದು ಬಹಳವೇ ಅಪರೂಪ ಆದರೆ ವರ್ಮಾ ಇಂದು ಅಪ್ಪು ಬಗ್ಗೆ ಆಡಿರುವ ಮಾತುಗಳು ಅಪ್ಪು ವ್ಯಕ್ತಿತ್ವ ಎಂಥಹುದಿತ್ತು ಎಂಬುದಕ್ಕೆ ಉದಾಹರಣೆ.
ಅಪ್ಸರಾ ರಾಣಿ ಜೊತೆ ಬಂದಿದ್ದ ವರ್ಮಾ
ರಾಮ್ ಗೋಪಾಲ್ ವರ್ಮಾ, ತಮ್ಮ ಮೆಚ್ಚಿನ ನಟಿ ಅಪ್ಸರಾ ರಾಣಿ ಜೊತೆ ಅಪ್ಪು ಸಮಾಧಿಗೆ ಭೇಟಿ ನೀಡಿದ್ದರು. ವರ್ಮಾ ಇದೀಗ ಮುತ್ತಪ್ಪ ರೈ ಜೀವನ ಕತೆಯನ್ನು ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಉಪೇಂದ್ರ, ಮುತ್ತಪ್ಪ ರೈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಈ ಹಿಂದೆ ರಾಮ್ ಗೋಪಾಲ್ ವರ್ಮಾ, ಶಿವರಾಜ್ ಕುಮಾರ್ ನಟನೆಯ 'ಕಿಲ್ಲಿಂಗ್ ವೀರಪ್ಪನ್' ಕನ್ನಡ ಸಿನಿಮಾ ಮಾಡಿದ್ದರು.