Don't Miss!
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಂಡಸಂಪತಿಗೆ: ಕಾಶಿ ಅಮ್ಮನಿಗೆ ತಿರುಗೇಟು ಕೊಟ್ಟ ಸುಮನಾ
ಕಾಶಿ ಅಮ್ಮನಿಗೆ ಮನೆಯವರ ಮುಂದೆ ಸುಮನಾ ತಿರುಗೇಟು ನೀಡಿದ್ದಾಳೆ. ನೀನು ಮೋಸದಿಂದ ನನ್ನ ಕಟ್ಟಿ ಹಾಕಿ ಈಗ ಇಲ್ಲಿ ಬಂದು ರಂಪಾಟ ಮಾಡುತ್ತಿದ್ದೀಯಾ ಎಂದು ತಿರುಗೇಟು ನೀಡಿದ್ದಾಳೆ. ನಾನು ನನ್ನ ಅಪ್ಪನ ಆಣೆ ಕಾಶಿನ ಮದುವೆಯಾಗೋದಾಗಿ ಹೇಳಿಲ್ಲ ಎಂದು ಹೇಳಿದ್ದಾಳೆ.
ಕಾಲೋನಿ ಜನರಿಗೆ ನಿನ್ನ ಮಗ ಎಂಥಹವನು ಎಂದು ಗೊತ್ತಿದೆ. ಪದೇ-ಪದೇ ನನ್ನ ಹೆಸರಿಗೆ ಕಳಂಕ ತರುತ್ತಿದ್ದಾರೆ. ನಿನ್ನ ಮಗ ಜೈಲಿಗೆ ಹೋಗಿದ್ದಾನೆ ಹೋಗಿ ತುಪ್ಪದ ದೀಪ ಹಚ್ಚು ಎಂದು ಹೇಳಿದ್ದಾಳೆ. ಈ ವೇಳೆ ಸಾಧನ ತನ್ನ ಮಾವನಿಗೆ ಮಸಾಲೆ ಹರೆಯಲು ಶುರು ಮಾಡಿದ್ದಾಳೆ. ಇಂಥಹವರಿಂದ ನಮ್ಮ ತೀರ್ಥನಿಗೆ ಉಳಿಗಾಲವಿಲ್ಲ ಎಂದು ತಿಳಿಸಿದ್ದಾರೆ. ಇತ್ತ ಸುಮನಾ ಕಾಶಿ ಅಮ್ಮನಿಗೆ ಇನ್ನೊಂದು ಮಾತು ಆಡಿದರು ಚನ್ನಾಗಿ ಇರಲ್ಲ ಎಂದು ತಿಳಿಸಿ ಬಾಯಿ ಮುಚ್ಚಿಸಿದ್ದಾಳೆ.
ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸುದೀಪ್ ಭೇಟಿ: ಕಿಚ್ಚನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು
ಕಾಶಿ ಅಮ್ಮ ಸುಮನಾಗೆ ನಿನ್ನ ನೆಮ್ಮದಿಯಾಗಿ ಇರಲು ನಾನು ಬಿಡೋದಿಲ್ಲ ಎಂದು ಸವಾಲು ಹಾಕಿದ್ದಾಳೆ. ಇತ್ತ ಸುಮನಾ ಮಾವನಿಗೂ ಇವಳು ನಿಮ್ಮನ್ನು ಉದ್ಧಾರ ಮಾಡ್ತಾಳೆ ಅಂತಾ ನಿನ್ನ ಮಗ ಕಟ್ಟಿಕೊಂಡು ಬಂದಿದ್ದಾನೆ ಆದರೆ ನಿನ್ನ ಮನೆಯನ್ನೇ ಹಾಳು ಮಾಡ್ತಾಳೆ ಎಂದು ಬೆಂಕಿ ಹಚ್ಚಿ ಹೋಗಿದ್ದಾಳೆ. ಇದು ಸಾಧನಾಳಿಗೆ ಒಂದು ರೀತಿಯಲ್ಲಿ ಖುಷಿ ತಂದು ಕೊಟ್ಟಿದೆ. ಆದರೆ ಕೇಶವ್ ಪ್ರಸಾದ್ ಚಿಂತೆಗೀಡಾಗಿದ್ದಾರೆ.
ಜನರ ಮಾತಿಗೆ ಚಿಂತೆ ಮಾಡಿದ ಕೇಶವ್ ಪ್ರಸಾದ್
ಜನರು ನಿಮ್ಮ ಮನೆಯ ಮುಂದೆ ಲೋಕಲ್ ಪೀಪಲ್ಸ್ ಬಂದು ಈ ರೀತಿ ರಂಪಾಟ ಮಾಡಿದ್ದಾರೆ. ಇದರಿಂದ ನಮಗೆ ತೊಂದರೆಯಾಗಿದೆ ಎಂದು ಕೇಳಿದ್ದಾರೆ. ನಿಮಗೆ ಆಗಿರುವ ತೊಂದರೆಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಕೇಶವ್ ಪ್ರಸಾದ್ ಕ್ಷಮೆಯಾಚಿಸಿದ್ದಾರೆ. ಇದರಿಂದ ನಮ್ಮ ಮನೆಯ ಮಾನಮಾರ್ಯದೆ ಹಾಳಾಗಿದೆ ಎಂದು ಚಿಂತೆಗೀಡಾಗಿದ್ದಾರೆ.
ಕಾಶಿಗೆ ಮುಹೂರ್ತ ಇಟ್ಟ ಕಾಲೋನಿ ಜನರು
ಇತ್ತ ಕೌನ್ಸಿಲರ್ ತೀರ್ಥರನ್ನು ಕೊಲೆ ಮಾಡಲು ಕಾಶಿ ಪ್ಲ್ಯಾನ್ ಮಾಡಿದ್ದು ಗೊತ್ತಾಗಿ ಕಾಲೋನಿ ಜನರು ಆತನಿಗೆ ಒಂದು ಗತಿಕಾಣಿಸಲು ಸುಮನಾ ತಂದೆ ರಾಮಣ್ಣನ ಮನೆ ಮುಂದೆ ಮಚ್ಚು,ಕುಡುಗೋಲು ಹಿಡಿದು ಬಂದು ನಿಂತಿದ್ದಾರೆ. ಆದರೆ ರಾಮಣ್ಣ ಸುಮನಾ ಮಾತು ಕೇಳಿ ಮುಂದುವರಿಯೋಣ ಎಂದು ಹೇಳಿದ್ದಾರೆ.
ಸುಮನಾಳನ್ನು ಹೊರಗೆ ಕಳಿಸಿದ ಕೇಶವ್ ಪ್ರಸಾದ್
ಎಲ್ಲಾ ಮಾತುಗಳನ್ನು ಕೇಳಿದ ಕೇಶವ್ ಪ್ರಸಾದ್ ಸುಮನಾಳನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ನನ್ನ ಮಗನ ಪ್ರಾಣಕ್ಕೆ ಸಂಚಕಾರ ಇರುವ ನೀನು ಮನೆಯಲ್ಲಿ ಇರುವುದು ಇಷ್ಟವಿಲ್ಲ ಎಂದು ಹೇಳುವ ಮೂಲಕ ಸುಮನಾ ಎಷ್ಟೇ ಬೇಡಿಕೊಂಡರು ಅದಕ್ಕೆ ಆಸ್ಪದ ನೀಡದೆ ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಗೆ ಹಾಕುತ್ತಾನೆ. ಸುಮನಾ ಬ್ಯಾಗ್ನ್ನು ಸಾಧನಾ ಖುಷಿಯಿಂದ ಹೊರಗೆ ತಂದು ಎಸೆದು ಹರ್ಷವನ್ನು ವ್ಯಕ್ತಪಡಿಸುತ್ತಾಳೆ.
ನೀವು ಹೇಳುವವರೆಗೂ ಮನೆಗೆ ಬರಲ್ಲ ಎಂದ ಸುಮನಾ
ಮಾವನ ಮಾತಿಗೆ ಕಟ್ಟು ಬಿದ್ದ ಸುಮನಾ ನೀವು ಫೋನ್ ಮಾಡಿ ಕರೆಯುವ ವರೆಗೂ ಮನೆಗೆ ಬರೋದಿಲ್ಲ ಎಂದು ಹೇಳುತ್ತಾಳೆ. ಅತ್ತೆ ಕರೆದರೂ ಅಷ್ಟೇ, ಸಾಹೇಬರು ಕರೆದರೂ ನಾನು ಮನೆಗೆ ಬರೋದಿಲ್ಲ ಎಂದು ನಮಸ್ಕಾರ ಮಾಡಿ ಮನೆಯಿಂದ ಹೊರಡುತ್ತಾಳೆ. ಈ ವೇಳೆ ಸಹ ಸಾಧನ ಅವಳಿಗೆ ಅವಮಾನವನ್ನು ಮಾಡಿ ಕಳಿಸುತ್ತಾಳೆ. ಆದರೂ ಸಹ ಸುಮನಾ ಸಹಿಸಿಕೊಂಡು ಮನೆಯಿಂದ ಹೊರಗೆ ಹೋಗುತ್ತಾಳೆ.