Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರುತಿ-ಸರ್ಜಾ ಮೀಟೂ ವಿವಾದಕ್ಕೆ ಚರಣ್ ರಾಜ್ 'ಸಂಧಾನ'ದ ಸಲಹೆ
Recommended Video
ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನ ದಿಗ್ಬ್ರಮೆಗೊಳಿಸಿದ್ದರು. ಅದಾದ ನಂತರ ನಡೆದ ಬೆಳವಣಿಗೆಗಳ ಬಗ್ಗೆ ನಿಮಗೆ ಗೊತ್ತಿದೆ.
ಸದ್ಯ ಶ್ರುತಿ ಮತ್ತು ಅರ್ಜುನ್ ಸರ್ಜಾ ಇಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಆದ್ರೆ, ಇದು ನ್ಯಾಯಾಲಯದಲ್ಲಿ ಬಗೆಹರಿಯುವ ಪ್ರಕರಣವಲ್ಲ ಎಂದು ಚಿತ್ರರಂಗದ ಹಿರಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸರ್ಜಾ ಮಗಳ ಪರೋಕ್ಷ ಆರೋಪಕ್ಕೆ 'ಆ ದಿನಗಳು' ಚೇತನ್ ನೇರ ಉತ್ತರ
ಇದೀಗ, ಸರ್ಜಾ ಮತ್ತು ಶ್ರುತಿ ಪ್ರಕರಣದ ಬಗ್ಗೆ ಹಿರಿಯ ನಟ ಚರಣ್ ರಾಜ್ ಮಾತನಾಡಿದ್ದಾರೆ. ಸುಮಾರು 35 ವರ್ಷದಿಂದ ಆಕ್ಷನ್ ಕಿಂಗ್ ಸ್ನೇಹಿತರಾಗಿರುವ ಚರಣ್ ರಾಜ್ ಇವರಿಬ್ಬರ ಈ ವಿವಾದಕ್ಕೆ ಸಂಧಾನವೇ ಪರಿಹಾರ ಎನ್ನುತ್ತಿದ್ದಾರೆ. ಹಾಗಿದ್ರೆ, ಚರಣ್ ರಾಜ್ ಹೇಳ್ತಿರೋದೇನು.? ಮುಂದೆ ಓದಿ....
ಅವರಿಬ್ಬರ ಮಧ್ಯೆ ಏನು ನಡೆದಿದೆ ನಮಗೆ ಗೊತ್ತಿಲ್ಲ
'ಅರ್ಜುನ್ ಸರ್ಜಾ 35 ವರ್ಷದಿಂದ ಪರಿಚಯ. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಶ್ರುತಿ ಹರಿಹರನ್ ಅವರು ಒಳ್ಳೆಯವರು. ಆದ್ರೆ, ನಾವು ನೀವು ಹೇಳೋದ್ರಿಂದ ಈ ಸಮಸ್ಯೆ ಪರಿಹಾರ ಆಗಲ್ಲ. ಅವರಿಬ್ಬರ ಮಧ್ಯೆ ಏನು ಇದೆಯೋ ನಮಗೆ ಗೊತ್ತಿಲ್ಲ. ಅದನ್ನ ನಾವು ಕೂಡ ನೋಡಿಲ್ಲ' ಎಂದು ಹಿರಿಯ ನಟ ಚರಣ್ ರಾಜ್ ಸಲಹೆ ನೀಡಿದ್ದಾರೆ.
ಪತಿವ್ರತೆ ಅಂತ ಸಾಬೀತು ಮಾಡೋಕೆ 'ಮೀಟೂ': ಗುರುಪ್ರಸಾದ್ ಫೈರ್.!
ಕೋರ್ಟ್ ನಲ್ಲಿ ಬಗೆಹರಿಯಲ್ಲ
'ನ್ಯಾಯಾಲಯದಲ್ಲಿ ಇದು ಇತ್ಯಾರ್ಥವಾಗಲ್ಲ. ಇನ್ನು ಅವರು, ಇವರು ಯಾರೇ ಮಾತನಾಡಿದ್ರು ಸಮಸ್ಯೆ ನಿವಾರಣೆಯಾಗಲ್ಲ. ಈ ಸಮಸ್ಯೆಯನ್ನ ಪರಿಹರಿಸಿಕೊಳ್ಳು ಅವರಿಬ್ಬರಿಂದ ಮಾತ್ರ ಸಾಧ್ಯ. ಯಾವುದೇ ಈಗೋ ಸಮಸ್ಯೆಯಿದ್ರೂ ಮಾತನಾಡಿದ್ರೆ ಒಳ್ಳೆಯದಾಗುತ್ತೆ. ಅವರಿಬ್ಬರೇ ಒಂದು ಕಡೆ ಕೂತು ಈ ಬಗ್ಗೆ ಮಾತನಾಡಬೇಕು'
ಪತಿವ್ರತೆ ಅಂತ ಸಾಬೀತು ಮಾಡೋಕೆ 'ಮೀಟೂ': ಗುರುಪ್ರಸಾದ್ ಫೈರ್.!
ಎಳೆಯುವುದು ಸರಿಯಲ್ಲ
'ನಾವೆಲ್ಲ ಸಮುದ್ರದಲ್ಲಿ ಈಜಿ ಬಂದಿರೋರು. ಕೆರೆಯಲ್ಲಿ ಬಂದು ಸಿಕ್ಕಿಹಾಕಿಕೊಂಡಿದ್ದೇವೆ ಅಂದ್ರೆ ಅಸಹ್ಯವೆನಿಸುತ್ತೆ. ಮನುಷ್ಯ ತಪ್ಪು ಮಾಡುವುದಲ್ಲದೇ ಮರಗಳು ತಪ್ಪು ಮಾಡಲ್ಲ. ಮರಕ್ಕೆ ಕಷ್ಟ ಬಂದ್ರೆ ಹೇಳಲು ಸಾಧ್ಯವಿಲ್ಲ. ಮನುಷ್ಯರೇ ಹೇಳಿಕೊಳ್ಳುವುದು'
ಅರ್ಜುನ್ ಸರ್ಜಾ-ಶ್ರುತಿ ಕೇಸ್ ಗೆ ಟ್ವಿಸ್ಟ್: ಪೊಲೀಸರ ಮುಂದೆ 'ವಿಸ್ಮಯ' ನಿರ್ಮಾಪಕ ಹೇಳಿದ್ದೇನು.?
ಜೀವನದಲ್ಲಿ ಚೆನ್ನಾಗಿರಬೇಕು ಅಂದ್ರೆ....
'ಅರ್ಜುನ್ ಸರ್ಜಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಶ್ರುತಿ ಅವರಿಗೆ ಮದುವೆ ಆಗಿದೆ. ಸುಮ್ಮನೆ ಈ ವಿವಾದವನ್ನ ಎಳೆಯುತ್ತಾ ಹೋದ್ರೆ, ಅವರ ಲೈಫ್ ಚೆನ್ನಾಗಿರಲ್ಲ. ಜೀವನದಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿದುಬಿಡುತ್ತೆ. ನಾನು ವೈಯಕ್ತಿಕವಾಗಿ ಹೇಳೋದು ಒಂದೇ ಇಬ್ಬರು ಮಾತನಾಡಿ ಬಗೆಹರಿಸಿ'' ಎಂದು ಅಭಿಪ್ರಾಯ ಪಟ್ಟರು'
ಸೆಟ್ ನಲ್ಲಿ ಶ್ರುತಿ ಹೇಳಿದ ಹಾಗೆ ಏನೂ ನಡೆದಿಲ್ಲ: ಪೊಲೀಸರ ಮುಂದೆ ನಿರ್ದೇಶಕ ಹೇಳಿಕೆ.!