Don't Miss!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- News Karnataka Rain: ರಾಜ್ಯಕ್ಕೆ ಶೇ.20ರಷ್ಟು ಮಳೆ ಕೊರತೆ: ಏಪ್ರಿಲ್ 25 ದಿನದಲ್ಲಿ ಸುರಿದ ಮಳೆ ವರದಿ ಇಲ್ಲಿದೆ
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾರ್ನಿಂಗ್ ಮಾಡೋರಿಗೆ ಪೈಲ್ವಾನ್ ಕಿಚ್ಚನ ಖಡಕ್ ಮಾತು
Recommended Video
ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ತಾರಕ್ಕೇರಿದೆ. ಕಿಚ್ಚ ಮತ್ತು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ನಟರ ಫ್ಯಾನ್ಸ್ ಪೇಜ್ ಗಳನ್ನು ನೋಡಿದ್ರೆ ನಿಜಕ್ಕು ಶಾಕ್ ಆಗುತ್ತೆ. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಿದ್ದಾರೆ.
ಫ್ಯಾನ್ಸ್ ಮಾತ್ರ ಕಿತ್ತಾಡುತ್ತಿದ್ದ ವಾರ್ ಗೆ ಈಗ ಸ್ಟಾರ್ ನಟರೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಮೊದಲು ದರ್ಶನ್ ಅನ್ನದಾತರನ್ನು, ಸೆಲಬ್ರಿಟಿಗಳನ್ನು ಕೆಣಕಬೇಡಿ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಬೆನ್ನಿಗೆ ನಿಂತಿದ್ದಾರೆ.
'ಪೈಲ್ವಾನ್' ನೋಡಿ ಸ್ಯಾಂಡಲ್ ವುಡ್ ಸ್ಟಾರ್ಸ್ ಹೇಳಿದ್ದೇನು?
ಇದರ ಬೆನ್ನಲ್ಲೆ ಈಗ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ. ದೀರ್ಘವಾದ ಪತ್ರ ಬರೆದಿರುವ ಕಿಚ್ಚ "ಕೆಲವು ಮಾತುಗಳನ್ನು ಕೇಳಿಸಿಕೊಳ್ಳದಿರುವುದೇ ಉತ್ತಮ, ನಾನು ಏನು ಎನ್ನುವುದನ್ನು ಬೇರೆ ಯಾರಿಗೊ ಸಾಭೀತು ಮಾಡಿ ತೋರಿಸುವ ಅವಶ್ಯಕತೆ ಇಲ್ಲ" ಎಂದು ಹೇಳಿದ್ದಾರೆ.
"ಯಾವಾಗಲು ಸತ್ಯಕ್ಕೆ ಮೇಲುಗೈ. ಪೈರಸಿ ವಿಚಾರದಲ್ಲಿ ಯಾರು ಕೂಡ ನಾನು ಆಗಲಿ ಅಥವಾ ಪ್ರೊಡಕ್ಷನ್ ಟೀಂ ಆಗಲಿ ಯಾರೊಬ್ಬರು ಯಾವ ನಟನ ಮೇಲು ಬೆಟ್ಟು ಮಾಡಿ ತೋರಿಸಿಲ್ಲ. ಆದ್ರೆ ಅನೇಕರು ಪೈರಸಿ ಲಿಂಕ್ ಅನ್ನು ಅತೀ ವೇಗವಾಗಿ ಶೇರ್ ಮಾಡಿದ್ದಾರೆ. ಆದ್ರೆ ಈಗ ಸೈಬರ್ ಕ್ರೈಮ್ ಗೆ ದೂರು ನೀಡಲಾಗಿದೆ. ಅವರು ನೋಡಿಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.
"ನಾನು ಚಿತ್ರರಂಗದಿಂದ ಪಡೆದ ಬೆಂಬಲ ಮತ್ತು ಸಹದ್ಯೋಗಿಗಳು ಒಳ್ಳೆತನದ ಬಗ್ಗೆ ಮಾತನಾಡುತ್ತಾರೆ. ನನ್ನ ಮೇಲೆ ಅವರು ಇಟ್ಟಿರುವ ಪ್ರೀತಿ, ಅವರೊಂದಿಗಿನ ನನ್ನ ಸಂಬಂಧ, ಎಲ್ಲಾ ಕಡೆಯಿಂದ ಬಂದ ಒಳ್ಳೆಯ ಅಂಶಗಳು ಮತ್ತು ಅವರು ತೋರುವ ಸಹಕಾರ ನನಗೆ ಹೆಚ್ಚು ಆಶೀರ್ವಾದ ನೀಡುತ್ತೆ. ಈ ಒಳ್ಳೆಯ ಜನರು ನನಗೆ ತುಂಬಾ ಪ್ರೀತಿ ತೋರುತ್ತಾರೆ. ಹೀಗಿರುವಾಗ ನಾನು ಏನು ಎನ್ನುವುದನ್ನು ನಿಜವಾಗಿಯೂ ಬೇರೆಯವರಿಗೆ ಸಾಭೀತು ಮಾಡುವ ಅವಶ್ಯಕತೆ ಇದೆಯೆ?" ಎಂದು ಕೇಳಿದ್ದಾರೆ.
"ಹೀಗೆ ಉದ್ದವಾದ ಪತ್ರಬರೆದಿರುವ ಸುದೀಪ್ ಕೊನೆಯದಾಗಿ ಜಗತ್ತನ್ನು ಗೆದ್ದ ಅಲೆಗ್ಸಾಂಡರ್ ಕೂಡ ಬರಿಗೈಯಲ್ಲಿ ಹೋದರು. ನಾವು ಈಜಗತ್ತಿಗೆ ನೆನಪುಗಳನ್ನು ಮಾತ್ರ ಬಿಟ್ಟು ಹೋಗೋಣ. ಈ ನೆನಪುಗಳು ಒಳ್ಳೆಯದಾಗಿರಬೇಕು. ಸುಂದರ ನೆನಪುಗಳು ಯಾವಾಗಲು ಜೀವಂತ ವಾಗಿರುತ್ತವೆ" ಎಂದು ಹೇಳಿದ್ದಾರೆ