Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿನಯ್ ರಾಜ್ ಕುಮಾರ್ ಸಿನಿಮಾಗೆ ತಾತನ ಚಿತ್ರದ ಟೈಟಲ್
'ದಾರಿ ತಪ್ಪಿದ ಮಗ' ಸಿನಿಮಾದ ಟೈಟಲ್ ನಲ್ಲಿ ಈಗಾಗಲೇ ರಾಜ್ ಮೊಮ್ಮಗ ಧೀರನ್ ರಾಜ್ಕುಮಾರ್ ಸಿನಿಮಾ ಮಾಡುತ್ತಿದ್ದಾರೆ. ಈಗ ಮತ್ತೊಬ್ಬ ಮೊಮ್ಮಗ ವಿನಯ್ ರಾಜ್ ಕುಮಾರ್ ಕೂಡ ತಾತನ ಚಿತ್ರದ ಹೆಸರನ್ನು ಇಟ್ಟುಕೊಂಡಿದ್ದಾರೆ.
ವಿನಯ್ ರಾಜ್ ಕುಮಾರ್ ಹೊಸ ಸಿನಿಮಾಗೆ 'ವೀರ ಕೇಸರಿ' ಎಂಬ ಟೈಟಲ್ ಇಡಲಾಗಿದೆ. ರಘು ವರ್ಧನ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕಥೆಗೆ 'ವೀರ ಕೇಸರಿ' ಎನ್ನುವ ಹೆಸರು ತುಂಬ ಚೆನ್ನಾಗಿ ಹೋಲುತ್ತಿದ್ದು, ಅದೇ ಹೆಸರನ್ನು ಬಳಸಿಕೊಳ್ಳಲಾಗಿದೆಯಂತೆ.
ಶಿವಣ್ಣ, ಪುನೀತ್ ನಂತರ 'ಬಾಕ್ಸರ್' ಆದ ವಿನಯ್
ರಾಜ್ ಕುಮಾರ್ ನಟನೆಯ 'ವೀರ ಕೇಸರಿ' ಸಿನಿಮಾ 1963 ರಲ್ಲಿ ಬಿಡುಗಡೆಯಾಗಿತ್ತು. ರಾಜ್ ಕುಮಾರ್, ಟಿ ಎಸ್ ಬಾಲಕೃಷ್ಣ, ಉದಯ್ ಕುಮಾರ್ ಆ ನಾಗೇಂದ್ರ ರಾವ್ ಸಿನಿಮಾದಲ್ಲಿ ನಟಿಸಿದ್ದರು.
ಖ್ಯಾತ ನಿರ್ದೇಶಕ ವಿಠಲಾಚಾರ್ಯ ಚಿತ್ರದ ನಿರ್ದೇಶನ ಮಾಡಿದ್ದರು. ಶೇಕ್ಸ್ ಪಿಯರ್ ಬರೆದಿರುವ 'ಟೇಮಿಂಗ್ ಆಫ್ ದಿ ಶ್ರ್ಯೂ' ಕೃತಿ ಆಧಾರಿಸಿ ಈ ಸಿನಿಮಾ ಮಾಡಲಾಗಿತ್ತು.
ಇಂತಹ 'ವೀರ ಕೇಸರಿ' ಚಿತ್ರದ ಹೆಸರನ್ನು ತಮ್ಮ ಸಿನಿಮಾಗೆ ಬಳಸಿಕೊಂಡಿದ್ದರೂ, ಹಳೆ ಚಿತ್ರಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ನಿರ್ದೇಶಕ ರಘುವರ್ಧನ್ ತಿಳಿಸಿದ್ದಾರೆ.