Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಖಿ ಸಾವಂತ್ ಪರ ನಿಂತ ಸಲ್ಮಾನ್ ಖಾನ್ ವಿರುದ್ಧ ಆಕ್ರೋಶ
ಬಿಗ್ಬಾಸ್ ಮೇಲೆ ಪಕ್ಷಪಾತದ ಆರೋಪ ಆಗಾಗ್ಗೆ ಬರುತ್ತಲೇ ಇರುತ್ತದೆ. ಕನ್ನಡದ ಬಿಗ್ಬಾಸ್ ಸಹ ಇದಕ್ಕೆ ಹೊರತಲ್ಲ. ಪ್ರತಿ ಬಿಗ್ಬಾಸ್ ಸೀಸನ್ ನಲ್ಲೂ ಈ ಆರೋಪ ಬರುತ್ತಲೇ ಇರುತ್ತದೆ, ಹಿಂದಿಯಲ್ಲಿಯಂತೂ ಪಕ್ಷಪಾತದ ಆರೋಪ ಹೆಚ್ಚು.
Recommended Video
ಹಿಂದಿ ಬಿಗ್ಬಾಸ್ ಸೀಸನ್ 14 ಪ್ರಸ್ತುತ ಪ್ರಸಾರವಾಗುತ್ತಿದ್ದು, ನಟ ಸಲ್ಮಾನ್ ಖಾನ್ ಬಿಗ್ಬಾಸ್ ಶೋ ನಿರೂಪಿಸುತ್ತಿದ್ದಾರೆ. ಖಡಕ್ ನಿರೂಪಕ ಎಂದು ಹೆಸರು ಪಡೆದಿರುವ ಸಲ್ಮಾನ್ ಖಾನ್ ಜೊತೆಗೆ ಪಕ್ಷಪಾತಿ ಎಂಬ ಆರೋಪಕ್ಕೂ ಪಾತ್ರರಾಗಿದ್ದಾರೆ.
''ದೊಡ್ಡ ಸೆಲೆಬ್ರಿಟಿ ಆಗ್ತೀನಿ, ಸಿನಿಮಾ ಆಫರ್ ಬರುತ್ತೆ ಅಂತ ಬಿಗ್ಬಾಸ್ಗೆ ಹೋಗಬೇಡಿ''
ಬಿಗ್ಬಾಸ್ ನ ಈ ಬಾರಿಯ ವೀಕೆಂಡ್ ಎಪಿಸೋಡ್ನ ನಿರೂಪಣೆ ಮಾಡಿದ ಸಲ್ಮಾನ್ ಖಾನ್, ಬಿಗ್ಬಾಸ್ ಮನೆಯಲ್ಲಿರುವ ರಾಖಿ ಸಾವಂತ್ಗೆ ಬೆಂಬಲವಾಗಿ ಮಾತನಾಡಿ, ಅಭಿನವ್ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ವಿಚಿತ್ರ ವರ್ತನೆ ಮುಂದುವರೆಸಿರುವ ರಾಖಿ
ತಮ್ಮ ಚಿತ್ರ ವಿಚಿತ್ರ ವರ್ತನೆ, ವಿವಾದಗಳಿಂದ ಖ್ಯಾತವಾಗಿರುವ ರಾಖಿ ಸಾವಂತ್ ಬಿಗ್ಬಾಸ್ ಮನೆಯಲ್ಲಿಯೂ ಅದೇ ವರ್ತನೆ ಮುಂದುವರೆಸಿದ್ದು, ಇತ್ತೀಚೆಗೆ ಅಭಿನವ್ನ ಚಡ್ಡಿಯನ್ನು ಕತ್ತರಿಸಿದ್ದರು. ಅದಕ್ಕೂ ಮುನ್ನಾ ದೆವ್ವ ಬಂದವರಂತೆ ವರ್ತಿಸಿದ್ದರು. ಬಟ್ಟೆಯಲ್ಲಿಯೇ ಮೂತ್ರ ಸಹ ಮಾಡಿಕೊಂಡಿದ್ದರು. ಇದೆಲ್ಲವೂ ಪ್ರೇಕ್ಷಕರಿಗೆ ಅತಿರೇಕ ಎನಿಸಿತ್ತು.
ರಾಖಿ ಸಾವಂತ್ ಪರವಾಗಿ ಸಲ್ಮಾನ್ ಖಾನ್ ಮಾತು
ಆದರೆ ಈ ಬಾರಿ ವೀಕೆಂಡ್ ಎಪಿಸೋಡ್ನಲ್ಲಿ ರಾಖಿ ಸಾವಂತ್ ಪರವಾಗಿ ಮಾತನಾಡಿದ ಸಲ್ಮಾನ್ ಖಾನ್, ರಾಖಿ ಜೊತೆ ವಾಗ್ವಾದ ನಡೆಸಿದ್ದ ಕಾರಣಕ್ಕೆ ಅಭಿನವ್ ವಿರುದ್ಧ ಹರಿಹಾಯ್ದರು. ಸಲ್ಮಾನ್ ಖಾನ್ ರ ಈ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
'ಬಿಗ್ ಬಾಸ್' ಕನ್ನಡ ರನ್ನರ್ ಅಪ್ ಗಳು ನೆನಪಿದ್ದಾರಾ? ಈಗೇನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ
ಅಭಿನವ್ ಒಬ್ಬ ಜಂಟಲ್ಮನ್ ಎಂದ ಗೌತಮ್ ಹೆಗಡೆ
ಕೆಲವು ಮಾಜಿ ಬಿಗ್ಬಾಸ್ ಸ್ಪರ್ಧಿಗಳು, ಟಿವಿ ನಟರು ಸಹ ಅಭಿನವ್ ಅನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಚಿತ್ರಕತೆ ಬರಹಗಾರ ಗೌತಮ್ ಹೆಗಡೆ ಅಂತೂ ಸಲ್ಮಾನ್ ಖಾನ್ ವರ್ತನೆ ವಿರುದ್ಧ ಇನ್ಸ್ಟಾಗ್ರಾಂ ನಲ್ಲಿ ಉದ್ದನೆಯ ಪೋಸ್ಟ್ ಒಂದನ್ನು ಬರೆದು, 'ಅಭಿನವ್ ನಿಜಕ್ಕೂ ಒಬ್ಬ ಜಂಟಲ್ಮನ್, ಈ ಬಾರಿಯ ವೀಕೆಂಡ್ ಎಪಿಸೋಡ್, ಬಿಗ್ಬಾಸ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಎಪಿಸೋಡ್' ಎಂದಿದ್ದಾರೆ.
ಪ್ರಾರಂಭವಾಗಲಿದೆ ಕನ್ನಡ ಬಿಗ್ಬಾಸ್
ಹಿಂದಿ ಬಿಗ್ಬಾಸ್ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಕನ್ನಡ ಬಿಗ್ಬಾಸ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಕನ್ನಡ ಬಿಗ್ಬಾಸ್ ನ ಪ್ರೋಮೊ ಬಿಡುಗಡೆ ಆಗಿದೆ. ಮಲಯಾಳಂ ಬಿಗ್ಬಾಸ್ ಸಹ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.
ಅವಕಾಶ ಸಿಕ್ಕಿಲ್ಲ, ಅದೃಷ್ಟನೂ ಇಲ್ಲ: 'ಕಾಮನ್ಮ್ಯಾನ್'ಗೆ ಬಿಗ್ಬಾಸ್ನಿಂದ ಸಿಕ್ಕಿದ್ದೇನು?