Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಜೆಪಿ ಶಾಸಕನ ವಿರುದ್ಧ ಹರಿಹಾಯ್ದ ನಟಿ ಕೃತಿ ಸೆನನ್ ಮತ್ತು ಇತರ ನಟರು
ಬಾಲಿವುಡ್ ಖ್ಯಾತ ಮಂದಿ ಆಡಳಿತದಲ್ಲಿರುವವರನ್ನು ಟೀಕಿಸುವ ಗೋಜಿಗೆ ಹೋಗುವುದು ಬಹಳ ಕಡಿಮೆ. ಬಿಜೆಪಿ ಅಧಿಕಾರದಲ್ಲಿರುವ ಈ ಸಮಯದಲ್ಲಂತೂ ಬಹಳಷ್ಟು ನಟ-ನಟಿಯರು ರಾಜಕೀಯ ವಿಮರ್ಶೆಯಿಂದ ದೂರವೇ ಉಳಿದಿದ್ದಾರೆ.
ಆದರೆ ಕೆಲವು ನಟಿಯರು ಮಾತ್ರ ಇದಕ್ಕೆ ಭಿನ್ನವಾಗಿ, ಸರ್ಕಾರವಾಗಲಿ, ಶಾಸಕ, ಸಂಸದ, ಮಂತ್ರಿ ಯಾರೇ ಆಗಿರಲಿ ತಮ್ಮ ಅಭಿಪ್ರಾಯವನ್ನು ನಿರ್ಭೀಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರಮುಖರು ಸ್ವರಾ ಭಾಸ್ಕರ್, ನಿರ್ದೇಶಕ ಅನುರಾಗ್ ಕಶ್ಯಪ್ ಇನ್ನೂ ಕೆಲವರು. ಇದೇ ಸಾಲಿಗೆ ಸೇರುವವರ ನಟಿ ಕೃತಿ ಸೆನನ್.
ಪ್ರೀತಿಸಿದವರನ್ನು ದೂರ ತಳ್ಳಬಾರದಿತ್ತು ನೀನು: ಕಣ್ಣೀರು ತರಿಸುವ ಸುಶಾಂತ್ ಮಾಜಿ ಗೆಳತಿಯ ಪತ್ರ
ದೇಶದಾದ್ಯಂತ ಸುದ್ದಿಯಾಗಿರುವ ಹತ್ರಾಸ್ ಅತ್ಯಾಚಾರ ಪ್ರಕರಣದ ಬಗ್ಗೆ ಬಿಜೆಪಿ ಶಾಸಕನೊಬ್ಬ ಆಡಿರುವ ಮತಿಹೀನ ಮಾತುಗಳನ್ನು ತೀವ್ರವಾಗಿ ಖಂಡಿಸಿದ್ದಾರೆ ನಟಿ ಕೃತಿಸೆನನ್.
'ಅತ್ಯಾಚಾರ ತಡೆಯಲು ಸರ್ಕಾರದಿಂದ ಆಗದು, ಸಂಸ್ಕಾರದಿಂದ ಆಗುತ್ತದೆ'
ಬಿಜೆಪಿ ಶಾಸಕ ಸುರೇಂದರ್ ಸಿಂಗ್, ಹತ್ರಾಸ್ ಅತ್ಯಾಚಾರದ ಕುರಿತಾಗಿ ಮಾಧ್ಯಮಗಳ ಬಳಿ ಮಾತನಾಡಿ, 'ಅತ್ಯಾಚಾರ ವು ಆಡಳಿತದಿಂದ ಅಥವಾ ಕತ್ತಿಯಿಂದ ನಿಲ್ಲಿಸಲು ಸಾಧ್ಯವಿಲ್ಲ, ಅತ್ಯಾಚಾರ ನಿಲ್ಲಿಸಲು ಸಂಸ್ಕಾರದಿಂದ ಮಾತ್ರದಿಂದ ಸಾಧ್ಯ' ಎಂದು ಹೇಳಿದ್ದಾರೆ ಸುರೇಂದರ್.
ಹೆಣ್ಣು ಮಕ್ಕಳಿಗೆ ಪೋಷಕರು ಸಂಸ್ಕಾರ ಕೊಡಬೇಕು: ಶಾಸಕ
ಮುಂದುವರೆದು, 'ತಂದೆ ತಾಯಿಗಳು ತಮ್ಮ ಯುವ ಹೆಣ್ಣುಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕು, ಹೇಗೆ ನಡೆಯಬೇಕು, ಹೇಗೆ ಇರಬೇಕು, ಹೇಗೆ ವ್ಯವಹರಿಸಬೇಕು, ಅತ್ಯಾಚಾರಕ್ಕೆ ಒಳಗಾಗದಂತಹಾ ಸಂಸ್ಕಾರ ನೀಡಬೇಕು, ಅದರಿಂದ ಮಾತ್ರ ಅತ್ಯಾಚಾರಗಳು ನಿಲ್ಲುತ್ತವೆ' ಎಂದಿದ್ದಾರೆ.
ಮಾಧ್ಯಮಗಳ ಮೇಲೆ ಕೆಂಡ ಕಾರಿದ ಸುಶಾಂತ್ ಸಿಂಗ್ ಗೆಳತಿ
ಗಂಡು ಮಕ್ಕಳಿಗೆ ಸಂಸ್ಕಾರ ಕೊಡಿ: ಕೃತಿ ಸೆನನ್
ಇದನ್ನು ತೀವ್ರವಾಗಿ ವಿರೋಧಿಸಿರುವ ಕೃತಿ ಸೆನನ್, 'ಈ ವ್ಯಕ್ತಿಗೆ ತಾನು ಏನು ಮಾತನಾಡುತ್ತಿದ್ದೇನೆಂಬ ಅರಿವಿದೆಯಾ, ತನ್ನದೇ ಮಾತನ್ನು ಪುನಃ ಈತ ಕೇಳಿಸಿಕೊಳ್ಳಬಲ್ಲನೇ? ಈ ರೀತಿಯ ಯೋಚನೆಗಳೇ ಬದಲಾಗಬೇಕಿರುವುದು, ಗಂಡು ಮಕ್ಕಳಿಗೆ ಯಾಕೆ ಇಂಥಹವರು ಸಂಸ್ಕಾರ ಕೊಡುವುದಿಲ್ಲ?' ಎಂದು ಪ್ರಶ್ನೆ ಮಾಡಿದ್ದಾರೆ.
Recommended Video
ಹಲವು ಬಾಲಿವುಡ್ ನಟ-ನಟಿಯರಿಂದ ವಿರೋಧ
ಶಾಸಕ ಸುರೇಂದರ್ ಹೇಳಿಕೆಗೆ ಇನ್ನೂ ಕೆಲವು ಬಾಲಿವುಡ್ ನಟ-ನಟಿಯರು ವಿರೋಧ ವ್ಯಕ್ತಪಡಿಸಿದ್ದು, 'ಅತ್ಯಾಚಾರ ಮಾಡಬಾರದು ಎಂಬ ಸಂಸ್ಕಾರವನ್ನು ಗಂಡು ಮಕ್ಕಳಿಗೆ ಕೊಡಿ' ಎಂದು ಹೇಳಿದ್ದಾರೆ. ಮತ್ತೊಬ್ಬ ನಟ, 'ಇಂಥಹಾ ಬುದ್ಧಿಹೀನರನ್ನು ಏಕೆ ಶಾಸಕನಾಗಿ ಆಯ್ಕೆ ಮಾಡುತ್ತಾರೆ' ಎಂದು ಪ್ರಶ್ನಿಸಿದ್ದಾರೆ.