twitter
    For Quick Alerts
    ALLOW NOTIFICATIONS  
    For Daily Alerts

    ಮಲ್ಟಿಸ್ಟಾರ್ ಸಿನಿಮಾ ಮಾಡೋಕೆ ದರ್ಶನ್ ಹಿಂದೇಟು ಹಾಕುತ್ತಿರುವುದು ಇದೇ ಕಾರಣಕ್ಕೆ!

    |

    Recommended Video

    Darshan says no to multistarer movies , But why ?

    ಬೇರೆ ಇಂಡಸ್ಟ್ರಿಗೆ ಹೋಲಿಸಿಕೊಂಡರೆ ಕನ್ನಡದಲ್ಲಿ ಮಲ್ಟಿಸ್ಟಾರ್ ಚಿತ್ರಗಳು ಬಹಳ ಅಪರೂಪ. ಅಲ್ಲೊಂದು ಇಲ್ಲೊಂದು ಸಿನಿಮಾ ಬಂದ್ರೆ ಅದೇ ಹೆಚ್ಚು. ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾ ಮಾಡೋಕೆ ಯಾವ ನಟರು ಮುಂದಾಗಲ್ಲ ಎಂದು ಹುಡುಕುತ್ತಾ ಹೋದರೆ ಹಲವು ಕಾರಣಗಳು ಸಿಗುತ್ತೆ.

    'ಗಂಡುಗಲಿ ಮದಕರಿ ನಾಯಕ' ದರ್ಶನ್ ಗಿಂತ ಈ ಇಬ್ಬರಿಗೆ ಬಹಳ ಮುಖ್ಯ!'ಗಂಡುಗಲಿ ಮದಕರಿ ನಾಯಕ' ದರ್ಶನ್ ಗಿಂತ ಈ ಇಬ್ಬರಿಗೆ ಬಹಳ ಮುಖ್ಯ!

    ಆದರೆ, ಮಲ್ಟಿಸ್ಟಾರ್ ಚಿತ್ರದ ಕುರಿತು ನಟ ದರ್ಶನ್ ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಯಾಕೆ ಇತರೆ ಸ್ಟಾರ್ ನಟರ ಜೊತೆಯಲ್ಲಿ ಸಿನಿಮಾ ಮಾಡಲು ಆಸಕ್ತಿ ತೋರಲ್ಲ ಎನ್ನುವುದಕ್ಕೆ ಇದೇ ಕಾರಣ ಎನ್ನಬಹುದು. ಅಷ್ಟಕ್ಕೂ, ದರ್ಶನ್ ಹೇಳಿದ್ದೇನು? ಮುಂದೆ ಓದಿ....

    ಡೈರೆಕ್ಟರ್ ಮೇಲೆ ನಂಬಿಕೆ ಕಮ್ಮಿ

    ಡೈರೆಕ್ಟರ್ ಮೇಲೆ ನಂಬಿಕೆ ಕಮ್ಮಿ

    ದರ್ಶನ್ ಅವರಿಗೆ ಹೊಸ ನಿರ್ದೇಶಕರ ಮೇಲೆ ನಂಬಿಕೆ ಕಮ್ಮಿ. ಯಾಕಂದ್ರೆ, ಅವರ ಕೆಲಸ ಏನು ಎಂದು ನೋಡಿರುವುದಿಲ್ಲ, ಕಥೆ ಕೇಳುವ ಸಮಯದಲ್ಲಿದ್ದಂತೆ ಸ್ಕ್ರಿಪ್ಟ್ ಸಿನಿಮಾ ಮುಗಿದಮೇಲೆ ಬಂದಿರುವುದಿಲ್ಲ. ಇಂತಹ ಅನುಭವ ಕೆಲವು ಚಿತ್ರಗಳಲ್ಲಿ ದರ್ಶನ್ ಅವರಿಗೆ ಎದುರಾಗಿದೆ. ಹಾಗಾಗಿ, ದರ್ಶನ್ ಅವರು ನಂಬಿಕಸ್ಥ ನಿರ್ದೇಶಕರಿಗೆ ಮಾತ್ರ ಕಾಲ್ ಶೀಟ್ ನೀಡುವುದು ಪದ್ದತಿ.

    ಸೆಲೆಕ್ಟೆಡ್ ನಿರ್ದೇಶಕರಿಗೆ ಮಾತ್ರ

    ಸೆಲೆಕ್ಟೆಡ್ ನಿರ್ದೇಶಕರಿಗೆ ಮಾತ್ರ

    ಹಾಗ್ನೋಡಿದ್ರೆ, ದರ್ಶನ್ ಅವರು ಹಿಂದೂ ಮುಂದೆ ನೋಡದೆ ಎಲ್ಲ ನಿರ್ದೇಶಕರಿಗೂ ಕಾಲ್ ಶೀಟ್ ನೀಡಲ್ಲ. ಅವರ ಕೆಲಸದ ಬಗ್ಗೆ ಗೊತ್ತಿದ್ದು, ಅವರ ಜೊತೆಯಲ್ಲಿ ಕೆಲಸ ಮಾಡಿದ್ದ ಕೆಲವರಿಗೆ ಮಾತ್ರ ಮಣೆ ಹಾಕ್ತಾರೆ. ದರ್ಶನ್ ಅವರ ಚಿತ್ರಗಳನ್ನ ಗಮನಿಸಿದರೆ, ರೆಗ್ಯುಲರ್ ನಿರ್ದೇಶಕರ ಜೊತೆ ಸಿನಿಮಾ ಮಾಡಿರುವುದೇ ಹೆಚ್ಚು.

    ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ ಮತ್ತು ದರ್ಶನ್: ಸ್ಟಾರ್ ನಟರು ಹೇಳಿದ್ದೇನು?

    ನಮ್ಮನ್ನು ಹ್ಯಾಂಡಲ್ ಮಾಡೋ ನಿರ್ದೇಶಕರಿಲ್ಲ

    ನಮ್ಮನ್ನು ಹ್ಯಾಂಡಲ್ ಮಾಡೋ ನಿರ್ದೇಶಕರಿಲ್ಲ

    ಶಿವರಾಜ್ ಕುಮಾರ್ ಅವರ ಅತ್ತೆ ಮಗ ಧ್ರುವನ್ ಅವರ ಚಿತ್ರದ ಮುಹೂರ್ತಕ್ಕೆ ಡಿ ಬಾಸ್ ಮತ್ತು ಶಿವಣ್ಣ ಒಟ್ಟಿಗೆ ಬಂದಿದ್ದರು. ಈ ವೇಳೆ ಮಾಧ್ಯಮದವರು, ''ಶಿವಣ್ಣ-ದರ್ಶನ್ ಅವರ ಜೋಡಿಯಲ್ಲಿ ಸಿನಿಮಾ ಯಾವಾಗ ನೋಡಬಹುದು'' ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್ ''ನಮ್ಮನ್ನು ಹ್ಯಾಂಡಲ್ ಮಾಡುವ ನಿರ್ದೇಶಕರಿಲ್ಲ, ಮೊದಲು ಅಂತಹ ಕತೆ ತಗೊಂಡು ಬರಲಿ, ಮಾಡೋಣ'' ಎಂದರು.

    2 ವರ್ಷದ ನಂತರ ದರ್ಶನ್ ಸಿನಿಮಾಗೆ ಹಾಡು ಬರೆದ ಜಯಂತ್ ಕಾಯ್ಕಿಣಿ2 ವರ್ಷದ ನಂತರ ದರ್ಶನ್ ಸಿನಿಮಾಗೆ ಹಾಡು ಬರೆದ ಜಯಂತ್ ಕಾಯ್ಕಿಣಿ

    ದರ್ಶನ್ ಮಾತು ನಿಜ ಎನಿಸುತ್ತೆ

    ದರ್ಶನ್ ಮಾತು ನಿಜ ಎನಿಸುತ್ತೆ

    ಒಂದೇ ಚಿತ್ರದಲ್ಲಿ ಇಬ್ಬರು ಸ್ಟಾರ್ ಗಳು ನಟಿಸುತ್ತಿದ್ದಾರೆ ಅಂದ್ರೆ ಆ ಎರಡು ನಟರಿಗೂ ಸಮಾನ ಪಾತ್ರ, ಸಮಾನ ಮಹತ್ವ ಇರಬೇಕು. ಇಲ್ಲ ಅಂದ್ರೆ ಅವರ ಅಭಿಮಾನಿಗಳು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅದರಿಂದ ಫ್ಯಾನ್ಸ್ ವಾರ್ ಹೆಚ್ಚಾಗಬಹುದು. ಹಾಗಾಗಿ, ಇದನ್ನೆಲ್ಲಾ ಬ್ಯಾಲೆನ್ಸ್ ಮಾಡುವ ಸ್ಕ್ರಿಪ್ಟ್ ಮತ್ತು ನಿರ್ದೇಶಕರಿದ್ದರೆ ಮಾತ್ರ ಡಿ ಬಾಸ್ ಸಿನಿಮಾ ಮಾಡ್ತೀನಿ ಅಂತಾರೆ.

    ಪುಷ್ಕರ್ ಟ್ವೀಟ್ ಬೆನ್ನಲ್ಲೆ 'ಡಿ-ಬಾಸ್' ಅಭಿಮಾನಿಗಳಲ್ಲಿ ಹೆಚ್ಚಾಯ್ತು ಚರ್ಚೆ!ಪುಷ್ಕರ್ ಟ್ವೀಟ್ ಬೆನ್ನಲ್ಲೆ 'ಡಿ-ಬಾಸ್' ಅಭಿಮಾನಿಗಳಲ್ಲಿ ಹೆಚ್ಚಾಯ್ತು ಚರ್ಚೆ!

    'ದಿ ವಿಲನ್' ಸಮಯದಲ್ಲೂ ಆದ ಘಟನೆ ಸ್ಮರಿಸಬಹುದು

    'ದಿ ವಿಲನ್' ಸಮಯದಲ್ಲೂ ಆದ ಘಟನೆ ಸ್ಮರಿಸಬಹುದು

    ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ನಟನೆಯ ದಿ ವಿಲನ್ ಸಿನಿಮಾ ಬಹಳ ನಿರೀಕ್ಷೆ ಹುಟ್ಟಿಹಾಕಿತ್ತು. ಇವರಿಬ್ಬನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾದು ಕುಂತಿದ್ದರು. ಆದರೆ, ದಿ ವಿಲನ್ ಸಿನಿಮಾ ರಿಲೀಸ್ ಆದ್ಮೇಲೆ, ಶಿವಣ್ಣ ಅಭಿಮಾನಿಗಳು ಮತ್ತು ನಿರ್ದೇಶಕ ಪ್ರೇಮ್ ನಡುವೆ ಕೆಲವು ವಾದ-ವಿವಾದ ಉಂಟಾಗಿತ್ತು. ಈ ಘಟನೆ ಆದ್ಮೇಲೆ ಇಂತಹ ಮಲ್ಟಿಸ್ಟಾರ್ ಚಿತ್ರಗಳು ಬರುವುದು ಈಗ ಕನಸಾಗಿ ಉಳಿದಿದೆ.

    English summary
    Challenging star darshan dont have intrest to do multi star movies.
    Monday, November 25, 2019, 14:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X