Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಮಸ್ಯೆಗೆ ಪರಿಹಾರ ನೀಡದೆ, ಬರೀ ಟ್ವೀಟ್ ಮಾಡುವ ಸ್ಟಾರ್ಸ್ ಗಳ ಬಗ್ಗೆ ಅಕ್ಷಯ್ ಬೇಸರ
ಒಂದು ಸಮಸ್ಯೆ ಬಂತು ಅಂದ್ರೆ, ಅನೇಕ ಸಿನಿಮಾ ತಾರೆಯರು ಮೊದಲು ಮಾಡುವ ಕೆಲಸ ಟ್ವೀಟ್. ಏನೇ ಘಟನೆ ನಡೆದರೂ, ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಆ ಘಟನೆಯ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾರೆ.
ಯಾರೋ ಕಷ್ಟದಲ್ಲಿ ಇರಲಿ, ಎಲ್ಲೊ ಪ್ರಳಯ ಆಗಲಿ, ಒಂದು ಟ್ವೀಟ್ ಮಾಡಿ ತಮ್ಮ ಕೆಲಸ ಆಯ್ತು ಅಂತ ಕೈ ಕಟ್ಟಿ ಕೂರುತ್ತಾರೆ. ಇಂತಹ ಸ್ಟಾರ್ ಗಳ ಬಗ್ಗೆ ನಟ ಅಕ್ಷಯ್ ಕುಮಾರ್ ಬೇಸರ ವ್ಯಕ್ತ ಪಡಿಸಿದ್ದಾರೆ.
ದತ್ತಣ್ಣನ ಸಾಧನೆಗೆ ಸಲಾಂ ಎಂದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್
ಇತ್ತೀಚಿಗಷ್ಟೆ 'ಮಿಷನ್ ಮಂಗಲ್' ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ''ಇತ್ತೀಚಿಗೆ ಅಸ್ಸಾಂನಲ್ಲಿ ಪ್ರವಾಹ ಆಯ್ತು. ಅದಕ್ಕೆ ಕೆಲವರು ಟ್ವಿಟ್ಟರ್ ನಲ್ಲಿ ತಮಗೆ ನೊವಾಗಿದೆ ಎಂದು ಬರೆದುಕೊಂಡರು. ಆದರೆ, ಆ ರೀತಿ ಬರೆದರೆ ಏನು ಉಪಯೋಗ ಇಲ್ಲ. ಅದನ್ನು ಬಿಟ್ಟು ಏನಾದರೂ ಸಹಾಯ ಮಾಡಿ.'' ಎಂದು ಹೇಳಿದ್ದಾರೆ.
''ಟ್ವೀಟ್ ಮಾಡುವುದನ್ನು ನಿಲ್ಲಿಸಿ, ಎದ್ದು ಏನಾದರೂ ಮಾಡಿ. ಈ ರೀತಿಯ ಸಮಸ್ಯೆಗಳು ಬಂದಾಗ ಸಹಾಯಕ್ಕೆ ಮುಂದಾಗಿ'' ಎಂದು ಅಕ್ಷಯ್ ಕುಮಾರ್ ಸ್ಟಾರ್ ಗಳಿಗೆ ಹೇಳಿದ್ದಾರೆ.
ಅಸ್ಸಾಂ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ಖಿಲಾಡಿ ಅಕ್ಷಯ್ ಕುಮಾರ್
ಅಸ್ಸಾಂ ನಲ್ಲಿ ಪ್ರವಾಹದಿಂದ ಅಲ್ಲಿನ ಜನ ಜೀವನ ಅಸ್ತವ್ಯಸ್ತ ಆಗಿದೆ. ಹೀಗಾಗಿ, ಅಕ್ಷಯ್ ಕುಮಾರ್ 2 ಕೋಟಿ ಹಣವನ್ನು ನೆರವು ನೀಡಿದ್ದರು.