Don't Miss!
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಿ ವಿಲನ್' ಬಾಯಲ್ಲಿ ಬರುವ ಹೈಲೈಟ್ ಡೈಲಾಗ್ ಗಳಿವು
ಸಿನಿಮಾಗೆ ಸಂಭಾಷಣೆ ಬಹು ಮುಖ್ಯ. ಪಾತ್ರಗಳು ಹೇಳುವ ಮಾತುಗಳು ನೋಡುಗರನ್ನು ಕಟ್ಟಿ ಕುರಿಸುವ ಶಕ್ತಿ ಹೊಂದಿರುತ್ತದೆ. ಅದರಲ್ಲಿಯೂ ಸ್ಟಾರ್ ಸಿನಿಮಾಗಳಲ್ಲಿ ಡೈಲಾಗ್ ಗಳಿಗೆ ಹೆಜ್ಜೆ ಮಹತ್ವ ಇರುತ್ತದೆ.
'ದಿ ವಿಲನ್' ಸಿನಿಮಾದಲ್ಲಿ ಕೂಡ ಸಖತ್ ಪಂಚಿಂಗ್ ಡೈಲಾಗ್ ಗಳು ಇದೆ. ಮಳವಳ್ಳಿ ಸಾಯಿಕೃಷ್ಣ ಬರವಣಿಗೆ ಮತ್ತೆ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಹಿಂದೆ 'ಜೋಗಿ' ಸಿನಿಮಾಗೆ ಒಳ್ಳೆ ಒಳ್ಳೆಯ ಸಾಲು ಬರೆದಿದ್ದ ಅವರು ಈಗಲೂ ಅದನ್ನು ಮುಂದುವರೆಸಿದ್ದಾರೆ.
'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!
ಮಾಸ್ ಡೈಲಾಗ್ ಗಳು, ರಾಮಾಯಣ ಮಹಾಭಾರತ ಹಿನ್ನೆಲೆಯ ಸಂಭಾಷಣೆಗಳು, ತಾಯಿಯ ಬಗ್ಗೆ ಇರುವ ಮಾತುಗಳು ಹೀಗೆ ಸಿನಿಮಾದಲ್ಲಿ ಇರುವ ಅನೇಕ ಡೈಲಾಗ್ ಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಅಂತಹ ಕೆಲವು ಸಂಭಾಷಣೆಗಳು ಮುಂದಿವೆ ಓದಿ...
ಶಿವರಾಜ್ ಕುಮಾರ್ ಸಂಭಾಷಣೆಗಳು
''ನಾನ್ ಸೈಲೆಂಟ್ ಆಗಿ ಇದ್ದರೆ ರಾಮ, ವೈಲೆಂಟ್ ಆದ್ನೋ ರಾವಣ''
''ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಆ ಭೇಟೆ ನಂದೇ'' -ಶಿವರಾಜ್ ಕುಮಾರ್ ಸಂಭಾಷಣೆ
ಟ್ವಿಟ್ಟರ್ ವಿಮರ್ಶೆ: ಶಿವಣ್ಣ-ಸುದೀಪ್ ಅಭಿಮಾನಿಗಳಿಗೆ ನಿರಾಸೆ ಆಗಲ್ಲ.!
ಸುದೀಪ್ ಸಂಭಾಷಣೆಗಳು
''ಆನೆ ಬಂತೊಂದ್ ಆನೆ.. ಯಾವ್ ಊರು ಆನೆ ಬಿಜಾಪುರದ್ ಆನೆ. ಇಲ್ಲಿಗೆ ಯಾಕೆ ಬಂತು. ರಾವಣನ ಕಥೆ ಹೇಳೋಕ್ಕೆ ಬಂತು.''
''ದೇಶಕ್ಕೆ ಒಬ್ಬರೆ ರಾಷ್ಟ್ರಪತಿ. ಅದೇ ರೀತಿ ಜಗತ್ತಿಗೆ ಒಬ್ಬನೇ ಅಧಿಪತಿ ಇರಬೇಕು ಅದು ನಾನಾಗಿರಬೇಕು''
'ದಿ ವಿಲನ್' ಬಿಡುಗಡೆ: ನರ್ತಕಿ ಚಿತ್ರಮಂದಿರದಲ್ಲಿ ನಿರ್ದೇಶಕ ಪ್ರೇಮ್ ಆಕ್ರೋಶ
ರಾಮ - ರಾವಣ
''ರಾಮ ತಂದೆಗಾಗಿ ವನವಾಸಕ್ಕೆ ಹೋದ, ರಾವಣ ತಾಯಿಗಾಗಿ ಶಿವನಿಂದ ಆತ್ಮಲಿಂಗವನ್ನೇ ಪಡೆದ. ರಾಮ ತಂದೆಗೆ ತಕ್ಕ ಮಗ, ರಾವಣ ತಾಯಿಗೆ ತಕ್ಕ ಮಗ.''
ತಾಯಿಯ ಬಗ್ಗೆಯ ಸಂಭಾಷಣೆ
''ತಾಯಿಗಿಂತ ಮಗ ಬೇಗ ಸತ್ತು ಹೋದರೆ, ಆಕೆಯ ಆಯಸ್ಸನ್ನು ತೆಗೆದುಕೊಂಡು ಹೋಗುತ್ತಾನೆ. ಆದರೆ, ತಾಯಿ ಮಗನಿಗಿಂತ ಬೇಗ ಸತ್ತು ಹೋದ್ರೆ ಆಯಸ್ಸು ಕೊಟ್ಟು ಹೋಗುತ್ತಾಳೆ.''