Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಜಮಾನ'ನ 'ಬಸಣ್ಣಿ' ಪದದ ಅರ್ಥ ಗೊತ್ತಾಯ್ತು.!
Recommended Video
'ಯಜಮಾನ' ಚಿತ್ರದ ಮೂರನೇ ಹಾಡು ಜನವರಿ 26ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಎರಡು ಹಾಡು ರಿಲೀಸ್ ಆಗಿದ್ದು, 'ಶಿವನಂದಿ' ಮತ್ತು 'ಓ ಮುಂಜಾನೆ' ದೊಡ್ಡ ಹಿಟ್ ಆಗಿದೆ.
ಈಗ 'ಬಸಣ್ಣಿ' ಹಾಡು ಗಣರಾಜ್ಯೋತ್ಸವದ ಪ್ರಯುಕ್ತ ತೆರೆಕಾಣುತ್ತಿದೆ. ಈ ಹಾಡಿನ ಹೆಸರು ಕೇಳಿದಾಗನಿಂದ ಕನ್ನಡ ಅಭಿಮಾನಿಗಳು ಶಾಕ್ ಆಗಿದ್ದಾರೆ. ಏನ್ ಗುರು ಇದು ಬಸಣ್ಣಿ. ಈ ಪದ ಯಾವತ್ತೂ ಕೇಳೇ ಇಲ್ಲ. ಏನಿದರ ಅರ್ಥ ಅಂತ ತಲೆಕೆಡಿಸಿಕೊಳ್ಳುತ್ತಿದ್ದಾರೆ.
ಜನವರಿ 26ಕ್ಕೆ 'ಯಜಮಾನ'ನ ಕಡೆಯಿಂದ ಇನ್ನೊಂದು ಉಡುಗೊರೆ
ಬಸಣ್ಣಿ ಎಂದರೇನು ಎಂದು ಗೂಗಲ್, ಡಿಕ್ಷನರಿಗಳಲ್ಲಿ ಸರ್ಚ್ ಮಾಡ್ತಿದ್ದಾರೆ. ನಿಜವಾದ ಅರ್ಥವೇನು ಎಂದು ಗೊತ್ತಾಗದೇ ಒಂದು ರೀತಿ ಟೆನ್ಷನ್ ಆಗಿದ್ದಾರೆ ಡಿ ಬಾಸ್ ಭಕ್ತರು. ಆಮೇಲೆ ಗೊತ್ತಾಯ್ತು ಇದು ಯೋಗರಾಜ್ ಭಟ್ ಅವರ ಸಾಹಿತ್ಯ ಅಂತ. ಅಷ್ಟಕ್ಕೂ, 'ಬಸಣ್ಣಿ' ಎಂದರೇನು?
ಭಟ್ಟರ ಸಾಹಿತ್ಯ
ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೇನೆ ಹೀಗೆ, ತಲೆಕೆಟ್ಟೋಗುತ್ತೆ. ಎಲ್ಲೂ ಕೇಳದಂತಹ ಅಪರೂಪದ ಪದಗಳನ್ನ ಬಳಸಿ ಸಾಹಿತ್ಯ ಬರೆಯುತ್ತಾರೆ. ಕೇಳೋಕೆ ಚೆಂದವೆನಿಸಿದರೂ ಅರ್ಥ ಮಾತ್ರ ಅನೇಕರಿಗೆ ಗೊತ್ತಾಗಲ್ಲ. ಈ ರೀತಿಯಾದ ಭಟ್ಟರು ಹಾಡುಗಳು ಹೆಚ್ಚಿವೆ.
ಹುಡುಗರ ಜೊತೆ 'ಯಜಮಾನ'ನ ಭರ್ಜರಿ ಕುಣಿತ
ಬಸಣ್ಣಿ ಅಂದರೇನು?
ಸದ್ಯದ ಮಾಹಿತಿ ಪ್ರಕಾರ ಬಸಣ್ಣಿ ಕೇವಲ ವ್ಯಕ್ತಿಯ ಹೆಸರು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. ಕೆಲವು ಕಡೆ ಕಥೆಗಳಲ್ಲಿ ವ್ಯಕ್ತಿಯ ಹೆಸರು ಹೇಳುವಾಗ ಈ ಪದವನ್ನ ಬಳಸುತ್ತಾರೆ ಎಂದು ಹೇಳಲಾಗ್ತಿದೆ. ಆದ್ರೆ, ನಿಜವಾದ ಅರ್ಥವನ್ನ ಭಟ್ಟರೇ ಹೇಳಬೇಕಿದೆ.
ಕನ್ನಡದ ಯಾವ ಹಾಡು ಮಾಡದ ದಾಖಲೆ ಬರೆದ 'ಯಜಮಾನ'
ಭಟ್ಟರು-ಹರಿಕೃಷ್ಣ ಜುಗಲ್ ಬಂದಿ
ಈ ಹಿಂದೆ ಚಿಂಗಾರಿ ಚಿತ್ರದ 'ಕೈ ಕೈಯ ಕಚ್ಚಾಸುಡಾ ಬಸುಡಾ' ಹೀಗೆ ಬಂದಿತ್ತು. ಪದಗಳಿಗೆ ಅರ್ಥವೇ ಗೊತ್ತಾಗದೇ ಇದ್ದ ಪ್ರೇಕ್ಷಕರು ಮಾತ್ರ ಹಾಡು ಕೇಳಿ ಎಂಜಾಯ್ ಮಾಡ್ತಿದ್ರು. ಇಂತಹ ಸಾಹಿತ್ಯ ಬಳಸೋದ್ರಲ್ಲಿ ಯೋಗರಾಜ್ ಭಟ್ ಎತ್ತಿದ ಕೈ. ಆಗ ಭಟ್ಟರ ಸಾಹಿತ್ಯಕ್ಕೆ ಸಂಗೀತ ನೀಡಿದ್ದು ಹರಿಕೃಷ್ಣ. ಈಗ ಅದೇ ಜೋಡಿ ಮತ್ತೆ 'ಬಸಣ್ಣಿ' ಹಾಡಿನ ಮೂಲಕ ಬಂದಿದೆ.
ರಿಲೀಸ್ ಆದ 7 ನಿಮಿಷದಲ್ಲಿ ದಾಖಲೆ ಬರೆದ 'ಯಜಮಾನ' ಎರಡನೇ ಹಾಡು
ಟ್ರೆಂಡ್ ಆಗೋದು ಪಕ್ಕಾ
ಸದ್ಯ, 'ಯಜಮಾನ' ಚಿತ್ರದ 'ಶಿವನಂದಿ' ಮತ್ತು 'ಓ ಮುಂಜಾನೆ' ಹಾಡುಗಳು ದೇಶದ ಮಟ್ಟದಲ್ಲಿ ಟ್ರೆಂಡ್ ಆಗಿವೆ. ಈಗ 'ಬಸಣ್ಣಿ' ಹಾಡಿನ ಮೇಲೆ ಡಿ ಬಾಸ್ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಸದ್ಯದ ನಿರೀಕ್ಷೆ ನೋಡಿದ್ರೆ, ಬಹುಶಃ ಈ ಹಾಡು ಟ್ರೆಂಡ್ ಆಗುವ ಎಲ್ಲಾ ಸಾಧ್ಯತೆಗಳಿವೆ.